Monday, June 27, 2011

60ಕೋಟಿ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯದಲ್ಲಿ ಎರಡನೇ ಹಂತದ ಕಾಮಗಾರಿ

ಮಂಗಳೂರು,ಜೂ.27:ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ 5,700ಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗಾಗಿ, ಮೂಲಭೂತ ಸೌಕರ್ಯಕ್ಕೆ 300 ಕೋಟಿ ವೆಚ್ಚ ಮಾಡಿದ್ದು, ದೇಶ ವಿದೇಶಗಳ ಭಕ್ತಾದಿಗಳನ್ನು ಆಕರ್ಷಿಸುವ ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಗೆ ಎರಡನೇ ಹಂತದಲ್ಲಿ 60 ಕೋಟಿ ರೂ.ಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿ ಯೂರಪ್ಪ ನವರು ಹೇಳಿದರು.


ಎರ ಡನೇ ಹಂತ ದಲ್ಲಿ ನೀರು ಸರ ಬರಾಜು,ಒಳ ಚರಂಡಿ, ವಸತಿ ಗೃಹ, ಗೋ ಶಾಲೆ, ರಥದ ಮನೆ ನಿರ್ಮಿ ಸುವು ದಾಗಿ ಹೇಳಿ ದರು. ಇದೇ ಸಂದ ರ್ಭದಲ್ಲಿ 5 ಕೋಟಿ ರೂ. ವೆಚ್ಚ ದಲ್ಲಿ ಪೂರ್ಣ ಗೊಳಿ ಸಿರುವ ಮೊದಲ ಹಂತದ ಅಭಿ ವೃದ್ಧಿ ಕಾಮ ಗಾರಿ ಉದ್ಘಾ ಟನೆ ಮಾಡಿ ದರು. ಅಲ್ಪ ಸಂಖ್ಯಾ ತರೂ ಸೇರಿ ದಂತೆ ಎಲ್ಲ ವರ್ಗದ ಜನ ರಿಗೆ ತಮ್ಮ ಆಡಳಿ ತಾವ ಧಿಯಲ್ಲಿ ಸಮಾನ ನ್ಯಾಯ ದೊರ ಕಿಸಿ ಕೊಟ್ಟಿ ರುವು ದಾಗಿ ಹೇಳಿದ ಅವರು ಅಧಿ ಕಾರಿ ಗಳು ಅಭಿ ವೃದ್ಧಿಗೆ ವೇಗ ನೀಡ ಬೇಕೆಂದು ಸೂಚಿ ಸಿದರು. ಡಾ ವಿ ಎಸ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್, ಉಪಸಭಾಧ್ಯಕ್ಷ ಎನ್ ಯೋಗೀಶ್ ಭಟ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಸಚಿವ ರೇಣುಕಾಚಾರ್ಯ, ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೇಶವ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಉರ್ಜಿಕೋಡಿ, ಧಾರ್ಮಿಕ ದತ್ತಿ ಇಲಾಕೆ ಆಯುಕ್ತರಾದ ಬಿ ಜಿ ನಂದಕುಮಾರ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ವೇದಿಕೆಯಲ್ಲಿದ್ದರು. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಸ್ವಾಮೀಜಿ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು.