ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂ ಗಣ ದಲ್ಲಿ ಏರ್ಪ ಡಿಸ ಲಾದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆ ಮತ್ತು ಕಾನೂನು ಅರಿವು ಕಾರ್ಯ ಕ್ರಮ ದಲ್ಲಿ ಸಂಪ ನ್ಮೂಲ ವ್ಯಕ್ತಿ ಗಳಾಗಿ ಮಾತನಾಡುತ್ತಿದ್ದರು. ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್, ಕಾರ್ಮಿಕ ಇಲಾಖೆ, ಶಿಕ್ಷಣ, ಪಂಚಾಯತ್ ರಾಜ್, ನಗರಾಭಿವೃದ್ದಿ, ರೇಷ್ಮೆ, ಕೈಗಾರಿಕೆ, ಬಿಸಿಎಂ,ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗಳು ಸಕ್ರಿಯ ಪಾತ್ರವಹಿಸಲಿವೆ ಎಂದರು.
ಸಾರ್ವಜನಿಕರು 1098 ಟೋಲ್ ಫ್ರೀ ನಂಬರ್ ನ್ನು ಬಳಸಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದು ಎಂದ ಕಾರ್ಮಿಕ ಆಯುಕ್ತರು, ಮಕ್ಕಳ ಹಕ್ಕು ಉಲ್ಲಂಘನೆ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಈ ಪದ್ಧತಿ ನಿವಾರಣೆಗೆಂದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ನೇತೃತ್ವದಲ್ಲಿ ಹೈಪವರ್ ಕಮಿಟಿ ಇದೆ. ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಮನ್ವಯ ಸಮಿತಿ ಸಭೆ ನಡೆಯುತ್ತದೆ. ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಸಭೆ ನಡೆಯುತ್ತದೆ. ಮಕ್ಕಳ ಹಕ್ಕು ಸಂರಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ಎಕ್ಸಿಕ್ಯೂಟಿವ್ ಕಮಿಟಿಯ ಇನ್ನೊಂದು ಸಮಿತಿಯೂ ಇದೆ ಎಂದು ವಿವರಿಸಿದರು.
ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವಿಕೆ ಹಕ್ಕು,ಸಾಮಾಜಿಕ ಭದ್ರತೆ ಹಕ್ಕುಗಳಿದ್ದು, ಎಲ್ಲ ಕಾಯಿದೆಗಳಲ್ಲು ಮಕ್ಕಳ ಹಕ್ಕು ಒಳಗೊಂಡಿದೆ. ಪೋಷಕರು ಕುಟುಂಬ ನಿರ್ವಹಣೇಗೆ ಮಕ್ಕಳನ್ನು ಬಳಸದಿರುವ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. 1986ರಲ್ಲಿ ಮಕ್ಕಳ ಹಕ್ಕು ಕಾಯಿದೆ ಜಾರಿಗೆ ಬಂತಾದರೂ 1988ರಿಂದ ಕಾನೂನಿನ ಕಠಿಣ ಅನುಷ್ಠಾನ ಶಿವಕಾಶಿ ಪಟಾಕಿ ಕಾರ್ಖಾನೆಯಿಂದಾಗಿ ಆರಂಭಗೊಂಡಿತು ಎಂದು ತಮ್ಮ ಸಂಪನ್ಮೂಲ ಭಾಷಣದಲ್ಲಿ ವಿವರಿಸಿದ ಆಯುಕ್ತರು ಮೈಸೂರಿನಲ್ಲಿ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಸ್ವಯಂಪ್ರೇರಿತವಾಗಿ ಕೈಗೊಂಡ ಕ್ರಮಗಳಿಂದ ಬಾಲಕಾರ್ಮಿಕ ಮುಕ್ತ ಗ್ರಾಮ ಸೃಷ್ಟಿಸಿದ ಉದಾಹರಣೆಯನ್ನು ಸಭೆಗೆ ನೀಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್,ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಘ-ಸಂಸ್ಥೆಗಳು ಮಾತ್ರ ಪ್ರಯತ್ನಿಸದೆ ಪ್ರತಿಯೊಬ್ಬ ನಾಗರಿಕನೂ ಹೊಣೆ ಹೊರಬೇಕು. ಆರ್ಥಿಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಮಾನವ ಕಳ್ಳ ಸಾಗಣೆಯ ಉದ್ದೇಶದಿಂದಲೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ತಡೆಯಲು ಜನಜಾಗೃತಿಯಿಂದ ಮಾತ್ರ ಸಾಧ್ಯ ಎಂದರು.