
ಅವರು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಮೈಸೂ ರಿನ ಆಡಳಿತ ತರ ಬೇತಿ ಸಂಸ್ಥೆ ಆಯೋ ಜಿಸಿದ್ದ 'ಮಾಹಿತಿ ಹಕ್ಕು -2005 ಕಾಯಿದೆ ಯ ಪರಿಣಾ ಮಕಾರಿ ಅನುಷ್ಠಾ ನದ ಮುಖಾಂ ತರ ಪಾರ ದರ್ಶ ಕತೆ ಮತ್ತು ಜವಾ ಬ್ದಾರಿ ವೃದ್ಧಿ' ಕುರಿತ ಕಾರ್ಯಾ ಗಾರ ದಲ್ಲಿ ಅಧಿ ಕಾರಿ ಗಳನ್ನು ಉದ್ದೇ ಶಿಸಿ ಮಾತ ನಾಡು ತಿದ್ದರು.
ಸರ್ಕಾರಿ ವ್ಯವಸ್ಥೆಯಲ್ಲಿ ಮಾಹಿತಿ ಪಡೆದುಕೊಳ್ಳುವ ಕ್ಲಿಷ್ಟ ಪ್ರಕ್ರಿಯೆಗೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಮಾಹಿತಿ ಹಕ್ಕು ಸಂಚಲನವನ್ನೇ ಮೂಡಿಸಿತು. ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪಡೆದುಕೊಂಡ ಅನುಕೂಲದ ಬಗ್ಗೆ ಸಮೀಕ್ಷೆ ನಡೆಸಿದಾಗ ಈ ಹಕ್ಕನ್ನು ಹೆಚ್ಚಾಗಿ ಬಳಸಿಕೊಂಡದ್ದು, ಸರ್ಕಾರಿ ಅಧಿಕಾರಿಗಳು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು ಎಂದು ಡಾ ಸಾಯಿರಾಂ ಭಟ್ ಹೇಳಿದರು.ಸಾರ್ವಜನಿಕ ಪ್ರಾಧಿಕಾರ, ದಾಖಲೆಗಳ ನಿರ್ವಹಣೆ, ಸೆಕ್ಷನ್ 4(1) (ಬಿ), ಅರ್ಧ ಮಾಹಿತಿ ನೀಡುವಿಕೆ, ಮೂರನೇ ಪಾರ್ಟಿ ಮಾಹಿತಿ ನೀಡುವುದು, ನೀಡಲಾಗದ ಮಾಹಿತಿಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.ಸಾರ್ವಜನಿಕ ಪ್ರಾಧಿಕಾರದ ಕರ್ತವ್ಯಗಳ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಈ ಕಾಯ್ದೆ ಕೇಂದ್ರ ಕಾನೂನಿಗೆ ಒಳಪಟ್ಟಿದ್ದರೂ ಇದನ್ನು ಅನುಷ್ಠಾನಗೊಳಿಸುವ ಸಂದರ್ಭ ಸಂಬಂಧಪಟ್ಟ ರಾಜ್ಯಗಳ ಸರಕಾರಗಳು ಕೆಲವೊಂದು ನಿಯಮಗಳನ್ನು ತರಬಹುದಾಗಿದೆ. ಸರಕಾರದ ಪಾಲುದಾರಿಕೆ ಹೊಂದಿರುವ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳು ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ. ಒಂದು ವರ್ಷದಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ಸರಕಾರಿ ಹಣಕಾಸು ನೆರವನ್ನು ಪಡೆಯುವ ಸರಕಾರೇತರ ಸಂಸ್ಥೆಗಳೂ ಸಹ ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ನ ಪ್ರಕರಣವೊಂದನ್ನು ಉದಾಹರಿಸಿದರು.


ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭಾರ ಸಿಇಒ ಶಿವರಾಮೇಗೌಡ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಸಂಯೋಜಕ ಕೆ.ಎಂ. ಪ್ರಸಾದ್, ಮಂಗಳೂರು ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಮಾರೋಪ ಸಮಾರಂಭದಲ್ಲಿ ಪಿಲಿಕುಳ ನಿಸರ್ಗಧಾಮದ ಆಡಳಿತಾಧಿಕಾರಿ ಹಾಗೂ ಡಿಟಿಐ ನ ಪ್ರಾಂಶುಪಾಲರಾದ ಜೆ.ಆರ್.ಲೋಬೋ ಉಪಸ್ಥಿತರಿದ್ದರು