Monday, March 25, 2013

ಚುನಾವಣಾ ಖರ್ಚುವೆಚ್ಚ: ಬ್ಯಾಂಕ್ ಅಧಿಕಾರಿಗಳ ಸಭೆ


ಮಂಗಳೂರು,ಮಾರ್ಚ್.25 :ಚುನಾವಣಾ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾಗಿ ನಿಗಾ ವಹಿಸಲು ಹಾಗೂ 50,000 ರೂ. ಗಳಿಗಿಂತ ಹೆಚ್ಚಿನ ನಗದು ವ್ಯವಹಾರಗಳ ಬಗ್ಗೆ ಕಣ್ಣಿಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚುನಾವಣಾ ಸದಾಚಾರ ಸಂಹಿತೆ ಮತ್ತು ಕೇಂದ್ರ ಚುನಾವಣಾ ಆಯೋಗ ಬ್ಯಾಂಕ್ ಗಳಿಗೆ ನೀಡಿದ ನಿರ್ದೇಶನ ದ ಮಾಹಿತಿ ನೀಡಿದರು.
ಅಭ್ಯ ರ್ಥಿಗಳ ಖಾತೆಯ ಮೇಲೆ ನಿಗಾ, ಅವರು ಹಣ ನಗದೀ ಕರಣ ಗೊಳಿ ಸಿದ ಬಗ್ಗೆ ಮಾಹಿತಿ, ವಿಶೇಷ ವಾಗಿ 50,000 ಕ್ಕಿಂತಲೂ ಹೆಚ್ಚು ಹಣ ಖಾತೆ ಯಿಂದ ತೆಗೆ ದರೆ, ಅನು ಮಾನಾ ಸ್ಪದ ವಾಗಿ ನಗದು ವ್ಯವ ಹಾರ ನಡೆ ಸಿದ ಚಟು ವಟಿಕೆ ಗಳ ಬಗ್ಗೆ ಲೀಡ್  ಬ್ಯಾಂಕ್ ಮ್ಯಾನೇ ಜರ್ ಮೂಲಕ ಪ್ರತಿ ದಿನದ ಮಾಹಿತಿ ಯನ್ನು ಜಿಲ್ಲಾ ಧಿಕಾ ರಿಗ ಳಿಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದರ ಜೊತೆಗೆ ಎಲ್ಲ ಬ್ಯಾಂಕುಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಪಟ್ಟಿಯನ್ನು ಆದ್ಯತೆ ಮೇಲೆ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಸಿಬ್ಬಂದಿಗಳ ಸಹಕಾರದ ಅಗತ್ಯವಿದೆ ಎಂದರು.ಪ್ರತಿದಿನ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಸಂಬಂಧ ವರದಿ ಕಳುಹಿಸುವ ಹೊಣೆ ನಮ್ಮದಾಗಿದ್ದು ನಗದು ವ್ಯವಹಾರದ ಬಗ್ಗೆ ಸಮಗ್ರ ಹಾಗೂ ಶೀಘ್ರ ಮಾಹಿತಿ ಬೇಕಿದೆ ಎಂದರು.