Friday, March 1, 2013

ರಾಜ್ಯ ಮಾನವ ಹಕ್ಕು ಆಯೋಗದಿಂದ ಜಿಲ್ಲೆಗೆ ಸಂಬಂಧಿಸಿದ 1068 ಪ್ರಕರಣಗಳಿಗೆ ಪರಿಹಾರ-ಆಯೋಗದ ಸದಸ್ಯ ಎಸ್.ಜಿ.ಹುನಗುಂದ

ಮಂಗಳೂರು, ಮಾರ್ಚ್.01:- ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದ ಂತೆ 2007 ರಿಂದ 2013 ನೇ ಫೆಬ್ರವರಿ 23 ರ ವರೆಗೆ ಒಟ್ಟು 1746 ವಿವಿಧ ಪ್ರಕರಣಗಳು ದಾಖಲಾಗಿದ್ದು,ಒಟ್ಟು 1068 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು,678 ಪ್ರಕರಣಗಳು ಬಾಕಿ ಇವೆಯೆಂದು ಆಯೋಗದ ಮಾನ್ಯ ಸದಸ್ಯರಾದ ಎಸ್.ಜಿ.ಹುನಗುಂದ ಅವರು ತಿಳಿಸಿದ್ದಾರೆ.
  ಅವರು ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಜಿಲ್ಲಾ ಮಟ್ಟದ ಅಧಿ ಕಾರಿ ಗಳೊಂದಿಗೆ ಸಮಾ ಲೋಚನೆ ನಡೆಸಿದರು.
ಎಂಡೋ ಸಲ್ಫಾನ್ ಪೀಡಿ ತರ ಅವ ಗಣನೆ ಮಾಡಿ ವಿಶೇಷ ಆರ್ಥಿಕ ವಲಯ ರಚನೆ ಯಂತಹ ಕ್ರಮ ಗಳ ಬಗ್ಗೆ ಜಿಲ್ಲಾ ಡಳಿತ ವಿಶೇಷ ಮುತು ವರ್ಜಿ ವಹಿಸ ಬೇಕೆಂ ದರು.ಕರ್ನಾ ಟಕ ರಾಜ್ಯದಲ್ಲಿ 2007 ರಿಂದ 2012 ರ ಡಿಸೆಂಬರ್ ಅಂತ್ಯದ ತನಕ ಒಟ್ಟು 37758 ಪ್ರಕರಣಗಳು ದಾಖ ಲಾಗಿದ್ದು, 24603 ಪ್ರಕರಣ ಗಳನ್ನು ಇತ್ಯರ್ಥ ಪಡಿಸಿ ರುವು ದಾಗಿ ಎಸ್.ಜಿ.ಹುನಗುಂದ ಅವರು ತಿಳಿಸಿದರು.ಅಧಿಕಾರಿಗಳು ಮಾನವೀಯವಾಗಿ ವರ್ತಿಸುವುದರಿಂದ ಹಲವು ಸಮಸ್ಯೆಗಳು ಸರಳವಾಗಿ ಬಗೆಹರಿಯಲಿವೆ. ಅಧಿಕಾರಿಗಳು ಮಾನವೀಯ ಧರ್ಮ ಪಾಲಿಸಿ ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎನ್.ಪ್ರಕಾಶ್,ಪೋಲೀಸ್ ಆಯುಕ್ತ ಮನೀಷ್ ಕರ್ಬಿಕರ್ ಹಾಗೂ ಅಪರ ಜಿಲ್ಲಾಧಿಕಾರಿ ದಯಾನಂದ ಸೇರಿದಂತೆ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.