Sunday, March 31, 2013

ಖರ್ಚು ವೆಚ್ಚ ವೀಕ್ಷಕರ ತಂಡಕ್ಕೆ ಜಿಲ್ಲಾಧಿಕಾರಿಗಳ ವಿಶೇಷ ಸಭೆ

ಮಂಗಳೂರು,ಮಾರ್ಚ್.31: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳು ಕಾಯರ್ಾಚರಿಸಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಎಲ್ಲ ಕ್ರಮಗಳಿಗೆ ಮುನ್ನುಡಿಯಾಗಿ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು.
       ಚುನಾ ವಣಾ ಖರ್ಚು ವೆಚ್ಚದ ನಿಗಾ ಇಡಲು ಜಿಲ್ಲಾ ನೋಡಲ್ ಅಕೌಂ ಟಿಂಗ್ ಅಧಿಕಾ ರಿಯಾಗಿ ಆದಾಯ ತೆರಿಗೆ ಅಧಿ ಕಾರಿ ಯನ್ನು ನೇಮಿ ಸಲಾ ಗಿದೆ. ಅವರಿಗೆ ಇಬ್ಬರು ಸಹಾ ಯಕ ರನ್ನು ನೇಮಿಸ ಲಾಗಿದೆ. ಬೆಳ್ತಂ ಗಡಿ, ಮೂಡ ಬಿದರೆ, ಮಂಗ ಳೂರು ಉತ್ತರ, ದಕ್ಷಿಣ, ಮಂಗ ಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಕ್ಕೆ ಪ್ರತ್ಯೇಕ ಅಧಿ ಕಾರಿ ಗಳ ತಂಡ ನೇಮಿಸಲಾಗಿದೆ.
ವಿಡಿಯೊ ಸರ್ವಲೆನ್ಸ್ ತಂಡವನ್ನು ಇದೇ ಮಾದರಿಯಲ್ಲಿ ರಚಿಸಲಾಗಿದ್ದು ಇವರಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇನ್ನೊಂದು ಪ್ರತ್ಯೇಕ  ವಿಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿದೆ. ಇನ್ನು ಪೇಯ್ಡ್ ನ್ಯೂಸ್ ಬಗ್ಗೆ ನಿಗಾ ಇಡಲು ಎಂ ಸಿ ಎಂಸಿ(ಮೀಡಿಯಾ ಸರ್ಟಿಪೈಯಿಂಗ್ ಅಂಡ್ ಮಾನಿಟರಿಂಗ್ ಕಮಿಟಿ) ಸಮಿತಿ ಕಾರ್ಯಾಚರಿಸಲಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ತಡೆಗೆ ರಚನಾತ್ಮಕ ವ್ಯೂಹ ರಚಿಸಲಾಗಿದ್ದು ಎಲ್ಲೆಡೆಯಿಂದಲೂ ವೀಕ್ಷಕರು ಪ್ರತಿಯೊಂದು ಚಟುವಟಿಕೆಯನ್ನು ವೀಕ್ಷಿಸಲಿರುವರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಲ್ಲ ಸಮಿತಿ ಗಳ ಜವಾ ಬ್ದಾರಿ ಮತ್ತು ಪಾತ್ರದ ಬಗ್ಗೆ ವಿವ ರಿಸಿದ ಅವರು, ಇಲ್ಲಿ ಸೃಷ್ಟಿ ಸಲಾ ಗಿರುವ ಯಾವುದೇ ಪಾತ್ರ ಗಳು ಕಾಲ್ಪನಿ ಕವಲ್ಲ. ಎಲ್ಲವೂ ಕಾರ್ಯಾ ನುಷ್ಠಾ ನಕ್ಕೆ ತರ ಲಾಗು ವಂತಹುದೇ. ಅದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂದೇಶ ನೀಡಿದರು. ಚುನಾವಣಾ ಅಕ್ರಮ ತಡೆಗೆ ಕಾರ್ಯಾಚರಿಸಲು ಪ್ರತಿಯೊಬ್ಬನಿಗೂ ಬೆಂಬಲವಾಗಿ ಜಿಲ್ಲಾ ಚುನಾವಣಾಧಿಕಾರಿಗಳಿರುತ್ತಾರೆ; ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದರು.
ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸ್ಥಾನ ಬಿಡದಿರಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕೆಂದರು.