Friday, March 29, 2013

ಮತದಾರರ ಪಟ್ಟಿ ಸ್ವಚ್ಛವಾಗಿರಲಿ: ಜಿಲ್ಲಾಧಿಕಾರಿ ಹರ್ಷ ಗುಪ್ತ

ಮಂಗಳೂರು, ಮಾರ್ಚ್. 29 : ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಪ್ರಗತಿ ವರದಿಯನ್ನು ಪ್ರತಿದಿನ ಬೆಳಗ್ಗೆ ತನಗೆ ನೀಡಬೇಕೆಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು. ಫಾರ್ಮ್ ನಂಬರ್ 6, 7 ಮತ್ತು 8 ಹಾಗೂ ಎಲ್ಲಿ ಹೆಚ್ಚು ನೋಂದಣಿಯಾಗಿದೆ; ಯಾವೆಲ್ಲ ಪ್ರದೇಶಗಳಲ್ಲಿ ಕಡಿಮೆ ನೋಂದಣಿಯಾಗಿದೆ ಎಂಬುದರ ಮಾಹಿತಿ ಕಾರಣ ಸಹಿತ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಮತ ದಾರರ ಪಟ್ಟಿ ಯಲ್ಲಿ ಹೆಸರು ಗಳ ಡೂಪ್ಲಿ ಕೇಟ್ ಆಗ ದಂತೆ ಹಾಗೂ ಸತ್ತ ವರ ಹಾಗೂ ಇತರ ಕಾರಣ ಗಳಿಂದ ಇಲ್ಲ ದವರ ಹೆಸ ರನ್ನು ಕೈ ಬಿಟ್ಟು ಸ್ವಚ್ಛ ಮತ ದಾರರ ಪಟ್ಟಿ ಯನ್ನು ರಚಿಸಿ ದರೆ ಮತ ದಾನದ ಶೇಕಡ ವಾರು ವಿವರ ಹಾಗೂ ಪಾಲ್ಗೊ ಳ್ಳುವಿ ಕೆಯನ್ನು ಖಚಿತ ಪಡಿಸಿ ಕೊಳ್ಳ ಬಹುದು ಎಂದು ಅವರು ನುಡಿದರು.
      ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ಅಧಿಕಾರಿಗಳ ನಡುವೆ ಸಂವಹನ ಅತಿ ಮುಖ್ಯವಾಗಿದ್ದು, ಮತದಾನದ ಪ್ರಕ್ರಿಯೆ ಯನ್ನು ಸೂಚನೆಯಂತೆ ಪಾಲಿಸಲು ಸುತ್ತೋಲೆಗಳಂತೆ ನಡೆದುಕೊಳ್ಳಿ. ಗಡಿ ಪ್ರದೇಶದ ಮತದಾರರ ಪಟ್ಟಿಯನ್ನು ತಯಾರಿಸುವಾಗ ಸೂಕ್ಷ್ಮವಾಗಿ ಕೆಲಸ ಮಾಡಿ ಎಂದರು. ಸೆಕ್ಟರ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಬೆನ್ನೆಲುಬಾಗಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ.ಅವರು ತಮ್ಮ ಬೂತ್ ಲೆವೆಲ್ ಅಧಿಕಾರಿಗಳೊಂದಿಗೆ ಪ್ರತಿದಿನ ಸಂಪರ್ಕವಿರಿಸಿಕೊಂಡು ಮಾಹಿತಿಯನ್ನು ಸಂಗ್ರಹಿಸಬೇಕು. ಸಭೆ ನಡೆಸಲು ನಿಗದಿತ ಜಾಗ ಗುರುತಿಸಿಕೊಳ್ಳಬೇಕು. ನಿಗದಿತ ಮಾದರಿಯಲ್ಲೇ ಮಾಹಿತಿ ತುಂಬಿ ಕಳುಹಿಸಿ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಿಟರ್ನಿಂಗ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಹೇಳಿದರು, ಮತದಾರರ ನೋಂದಣಿ ಕಾರಣಗಳನ್ನು ವಿಶ್ಲೇಷಿಸಿ; ಎಲ್ಲಿ ತಪ್ಪಾಗಿದೆ, ಯಾರು ಹೊಣೆ ಎಂಬ ಬಗ್ಗೆಯೂ ಸ್ಪಷ್ಟಪಡಿಸಿದರು.
 ಕ್ಷೇತ್ರ ವಾರು ಡಿ ಡುಪ್ಲಿ ಕೇಷನ್ ತಡೆ ಯಲು ಬೇಕಾದ ಕ್ರಮ ಗಳನ್ನು ಕೈ ಗೊಳ್ಳಲು ನಿರ್ದೇ ಶನ ನೀಡಿ ದರು. ಆರ್ ಒ ಗಳು ಮತ್ತು ಎ ಆರ್ ಒ ಗಳಿಗೆ ಹೆಚ್ಚಿನ ಜವಾ ಬ್ದಾರಿ ಯಿದ್ದು, ಫೋಟೋ ಗಳಿ ಲ್ಲದೆ (ಎಪಿಕ್) ವೋಟರ್ ಐ ಡಿ ಇರ ಬಾರದು ಎಂದರು.
ಸ್ವೀಪ್ ಬಗ್ಗೆಯೂ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಕ್ಷೇತ್ರವಾರು ಕಡಿಮೆ ಮತದಾನವಾದ ಪ್ರದೇಶಗಳನ್ನು ವಿಶೇಷ ಗಮನದಲ್ಲಿರಿಸಿ, ಮತದಾನವನ್ನು ಹೆಚ್ಚಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಬಿಎಲ್ ಒ ಗಳ ಸಹಕಾರ ಪಡೆಯಿರಿ. ಮತದಾನವಾಗದಿರುವ ಸಮಸ್ಯೆ ಮೂಲ ಹುಡುಕಿ. ಸಹಾಯಕ ಆಯುಕ್ತರು ಈ ಸಂಬಂಧ ತಮಗೆ ಫೀಡ್ ಬ್ಯಾಕ್ ಕೊಡಿ. ಬಿ ಎಲ್ ಒ ಗೆ ಕಳೆದ ಬಾರಿಯ ಪಟ್ಟಿ ಕೊಟ್ಟು ಕಾರಣ ಕೇಳಿ. ವೋಟಿಂಗ್ ಪರ್ಸಂಟೇಜ್ ಜಾಸ್ತಿ ಆದರೆ ಬಿ ಎಲ್ ಒ ಗಳಿಗೆ ವಿಶೇಷ ಸಂಭಾವನೆ ಕೊಡುವ ಬಗ್ಗೆಯೂ ಚಿಂತಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ .ಎ., ಸಿಇಒ ಹಾಗೂ ಸ್ವೀಪ್ ಅಧ್ಯಕ್ಷರಾದ ಡಾ ಕೆ ಎನ್ ವಿಜಯಪ್ರಕಾಶ್ ಹಾಗೂ ಮಹಾನಗರಪಾಲಿಕೆ ಆಯುಕ್ತರು ಉಪಸ್ಥಿತರಿದ್ದರು