Monday, March 4, 2013

ನೀತಿ ಸಂಹಿತೆ ಉಲ್ಲಂಘನೆ: ನೋಟೀಸ್ ಜಾರಿ

ಮಂಗಳೂರು,ಮಾರ್ಚ್.04:- ಮಾಧ್ಯಮ ಸಮಿತಿಯ ಅನುಮತಿ ಪಡೆಯದೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನ ಸಮಿತಿ ಕಾರ್ಯದರ್ಶಿ ಹಾಗೂ ಬಿಜೆಪಿ ಪಕ್ಷದ ಕಾರ್ಯದರ್ಶಿಗಳಿಗೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳೂ, ಮಾಧ್ಯಮ ಸಮಿತಿಯ ಸಂಚಾಲಕರೂ ನೋಟೀಸು ಜಾರಿಮಾಡಿದ್ದು, 24 ಗಂಟೆಗೊಳಗಾಗಿ ಉತ್ತರಿಸುವಂತೆ ತಿಳಿಸಿದ್ದಾರೆ.
ಇದಕ್ಕೆ ಹೊರತಾಗಿ ಅನುಮತಿಯಿಲ್ಲದೆ ವೈಯಕ್ತಿಕ ಜಾಹೀರಾತು ನೀಡಿರುವ ಗಣೇಶ್, ರಾಜೇಶ್ ಕುಳಾಯಿ,ಭಾಸ್ಕರ ಚಂದ್ರ ಶೆಟ್ಟಿ, ಶಶಿಧರ ಹೆಗ್ಡೆ, ಲೇನ್ಸ್ ಲೋಟ್ ಪಿಂಟೋ, ಮೋಹನ್ ಪಡೀಲ್ ಇವರುಗಳಿಗೆ ಕಾರಣಕೇಳಿ ನೋಟೀಸ್ ನೀಡಲಾಗಿದೆ. 24 ಗಂಟೆಗೊಳಗಾಗಿ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.