Monday, March 18, 2013

ಮುಖ್ಯಮಂತ್ರಿಯಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ

ಮಂಗಳೂರು, ಮಾರ್ಚ್.18: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ನಗರದ ವಿವಿಧ ಕಡೆಗಳಲ್ಲಿ 15ಕ್ಕೂ ಅಧಿಕ ವಿವಿಧ ಕಾಮಗಾರಿಗಳಿಗೆ ಸಾಮೂಹಿಕ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು.
               ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಬಂದಿ ಳಿದ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು ಆರಂ ಭದಲ್ಲಿ ಮಂಗ ಳೂರು ಮಹಾ ನಗರ ಪಾಲಿ ಕೆಯ ವಿಮಾನ ನಿಲ್ದಾಣ ರಸ್ಥೆ ಅಭಿ ವೃದ್ಧಿಯ ಪ್ರಥಮ ಹಂತದ ಕಾಮ ಗಾರಿಗೆ ಚಾಲನೆ ನೀಡಿ ದರು.
ನಗ ರದ ಕೆಪಿಟಿ ಯಿಂದ ರಾಮಾ ಶ್ರಮ ಶಾಲೆ ಯವ ರೆಗಿನ 1.7 ಕಿ.ಮೀ. ಉದ್ದದ ಡಾ. ಸರ್ ಎಂ. ವಿಶ್ವೇ ಶ್ವರಯ್ಯ ಚತು ಷ್ಪಥ ರಸ್ತೆ ಕಾಮ ಗಾರಿಯ ನಾಮ ಫಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ಫುಟ್ಪಾತ್, ಚರಂಡಿ, ಬಸ್ಸು ನಿಲ್ದಾಣವನ್ನು ಒಳಗೊಂಡ 2.43 ಕೋಟಿ ರೂ. ವೆಚ್ಚದ ಕೆಪಿಟಿಯಿಂದ ರಾಮಾಶ್ರಮ ಶಾಲೆವರೆಗಿನ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಇದಾಗಿದೆ.
  ಅಲ್ಲಿಂದ ಲೇಡಿ ಗೋಶನ್ ಆಸ್ಪತ್ರೆಯ ಶಂಕು ಸ್ಥಾಪನೆ ಕಾರ್ಯ ಕ್ರಮ ದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಡಾ. ಎಂ. ವೀರಪ್ಪ ಮೊಯಿಲಿ ಅವರೋಂದಿಗೆ ಭಾಗ ವಹಿ ಸಿದ  ಮುಖ್ಯ ಮಂತ್ರಿ ಬಳಿಕ ನಗ ರದ ಉರ್ವಾ ಮಾರ್ಕೆಟ್ ಬಳಿ ಮುಂಬೈನ ನಿಸರ್ಗ ಟೆಕ್ನಾ ಲಜಿಯ ತಾಂತ್ರಿಕ ಸಹ ಯೋಗದೊಂದಿಗೆ 2 ಟನ್ ಸಾಮಥ್ರ್ಯದ ಜೈವಿಕ ಕಿರು ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಉದ್ಘಾಟಿಸಿದರು.
       15 ಕೆವಿಎ ಸಾಮ ಥ್ರ್ಯದ ಜನ ರೇಟರ್ ಅಳವ ಡಿಸ ಲಾಗಿ ರುವ ಈ ಸ್ಥಾವ ರದಲ್ಲಿ 1 ಗಂಟೆಗೆ 12 ಕಿಲೋ ವ್ಯಾಟ್ ವಿದ್ಯುತ್ ಉತ್ಪಾ ದನೆ ಮಾಡ ಲಾಗು ತ್ತಿದೆ. ಪ್ರಸ್ತುತ ಸ್ಥಾವ ರದಲ್ಲಿ ದಿನ ವೊಂದಕ್ಕೆ 240 ಯುನಿಟ್ ವಿದ್ಯುತ್ ಉತ್ಪಾ ದಿಸಬ ಹುದು. ಈ ವಿದ್ಯುತ ನಿಂದ ಸುಮಾರು 40 ವ್ಯಾಟ್ ಸಾಮರ್ಥ್ಯದ 200 ದಾರಿ ದೀಪಗಳನ್ನು ಉರಿಸಬಹುದಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಸದ್ರಿ ಜನರೇಟರ್ನಿಂದ ಉತ್ಪಾದಿಸುತ್ತಿರುವ ವಿದ್ಯುತ್ತನ್ನು ಜೈವಿಕ ಅನಿಲ ಸ್ಥಾವರದ ಉಪಯೋಗಕ್ಕೆ ಹಾಗೂ ಉರ್ವ ಮಾರುಕಟ್ಟೆ ಆವರಣಕ್ಕೆ ಪೂರೈಸಲಾಗುತ್ತಿದೆ.
         ಇದಾದ ಬಳಿಕ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು ಮಂಗ ಳಾ ಕ್ರೀಡಾಂ ಗಣ ದಲ್ಲಿ ಸುಮಾರು 3.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲಾ ಗಿರುವ ಸಿಂಥೆ ಟಿಕ್ ಟ್ರ್ಯಾಕ್ ನಲ್ಲಿ ಇತರ ಜನ ಪ್ರತಿ ನಿಧಿ ಗಳ ಜೊತೆ ಸ್ವತಹ ಓಡುವ ಮೂಲಕ ನೂತನ ಟ್ರಾಕ್ ಗೆ ಚಾಲನೆ ನೀಡಿದರು. ಇದೇ ವೇಳೆ  ಮಂಗಳಾ ಕ್ರೀಡಾಂ ಗಣ ದಲ್ಲಿ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು 99. 90 ಲಕ್ಷ ರೂ. ವೆಚ್ಚದ ಕ್ರೀಡಾ ವಸತಿ ನಿಲಯ, 2.5 ಕೋಟಿ ರೂ. ವೆಚ್ಚದ ಪಾಂಡೇ ಶ್ವರ ಅಗ್ನಿ ಶಾಮಕ ಠಾಣೆಯ ನೂತನ ಕಟ್ಟಡ, 61.10 ಲಕ್ಷ ರೂ. ವೆಚ್ಚದ ಅರಣ್ಯ ಇಲಾಖೆಯ ಮಂಗ ಳೂರು ವೃತ್ತ ಕಚೇರಿ, 3.92 ಕೋಟಿ ರೂ. ವೆಚ್ಚದ ಮೆಟ್ರಿಕ್ ನಂತ ರದ ಬಾಲಕಿ ಯರ ವಸತಿ ನಿಲಯ, 3.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಅಂತಾರಾಷ್ಟ್ರೀಯ ಈಜು ಕೊಳ, 2.5 ಕೋಟಿ ರೂ. ವೆಚ್ಚದ ಬಲ್ಮಠದ ಪ್ರಥಮ ದರ್ಜೆ ಮಹಿಳಾ ಕಾಲೇಜು ಮೊದಲಾದ ವಿವಿಧ ಕಾಮಗಾರಿಗಳಿಗೆ ಸಾಮೂಹಿಕವಾಗಿ ಚಾಲನೆ ನೀಡಿದರು.
        ಬಳಿಕ ಅವರು ಪಿಲಿ ಕುಳ ನಿಸರ್ಗ ಧಾಮ ದಲ್ಲಿ 24.50 ಕೋಟಿ ವೆಚ್ಚ ದಲ್ಲಿ ನಿರ್ಮಾ ಣವಾ ಗುತ್ತಿ ರುವ ಸ್ವಾಮಿ ವಿವೇಕಾ ನಂದ ತಾರಾ ಲಯಕ್ಕೆ ಶಂಕು ಸ್ಥಾಪನೆ ನೆರ ವೇರಿ ಸಿದರು. ಎರಡು ವರ್ಷದ ಅವಧಿಯಲ್ಲಿ ತಾರಾ ಲಯ ಪೂರ್ಣ ಗೊಂಡು ಸಾರ್ವ ಜನಿಕ ರಿಗೆ ಮುಕ್ತ ವಾಗುವ ನಿರೀಕ್ಷೆ ಇದೆ. ಇದೇ ವೇಳೆ 3.73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಗುತ್ತು ಮನೆಯ ಉದ್ಘಾಟನೆಯನ್ನು ಕೂಡಾ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರು.ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಶಾಸಕರಾದ ಕೃಷ್ಣ ಜೆ. ಪಾಲೆಮಾರ್, ಬಿ. ರಮಾನಾಥ ರೈ, ಮೋನಪ್ಪ ಭಂಡಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಭಯ ಚಂದ್ರ ಜೈನ್, ಸಹಿತ ಅನೇಕ ಗಣ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.