Tuesday, July 31, 2012

ಪುತ್ತೂರು ಪುರಸಭೆ ವ್ಯಾಪ್ತಿಯ ವಾಹನ ಸಂಚಾರ ವ್ಯವಸ್ಥೆ:ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಜುಲೈ 31:ಪುತ್ತೂರು ಪುರಸಭೆ ವ್ಯಾಪ್ತಿಯ ಒಳಗಡೆ ವಾಹನ ಸಂಚಾರದ ವ್ಯವಸ್ಥೆ ,ಸಂಚಾರ ನಿಯಂತ್ರಣ,ವಾಹನ ನಿಲುಗಡೆ,ಅಟೋರಿಕ್ಷಾ ಪಾರ್ಕಿಂಗ್,ಏಕಮುಖ ಸಂಚಾರ ಇತ್ಯಾದಿ ವ್ಯವಸ್ಥೆ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣಕನ್ನಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತಾರೆ.
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಶುಲ್ಕ ಪಾವತಿ ಮಾಡುವ ಅಟೋರಿಕ್ಷಾ ಪಾರ್ಕ್ ಗಳಿಗೆ ಮುರರಸ್ತೆಯ ಎಡಬದಿ,ನೆಹರುನಗರ ವಿವೇಕಾನಂದ ಕಾಲೇಜು ತಿರುಗುವ ಬದಿಯಲ್ಲಿ,ಸುಧಾನ ಶಾಲೆ ಬಸ್ ನಿಲ್ದಾಣದ ಬಳಿ,ಬೊಳುವಾರು ಮಾಕರ್ೆಟ್ ಬಳಿ,ಅಂಜನೇಯ ದೇವಸ್ಥಾನದ ಬಳಿ,ಪುತ್ತೂರು ಸಂಚಾರ ಪೋಲೀಸ್ ಠಾಣೆ ಬಳಿ,ಬಸ್ ನಿಲ್ದಾಣದ ಬಳಿ ಸೂಪರ್ ಟವರ್ ಮುಂಭಾಗ,ಜೆ.ಕೆ.ಸಂಕೀರ್ಣದ ಎದುರು,ಎಲ್.ಐ.ಸಿ ಕಚೇರಿ ಬಳಿ,ದಭರ್ೆಯ ಸುಳ್ಯ ರಸ್ತೆಯ ಎಡಭಾಗ ,ಸುಬ್ರಹಣ್ಯ ರಸ್ತೆ ಬಲಭಾಗ,ಫಿಲೋಮಿನಾ ಕಾಲೇಜಿನ ಗೇಟಿನ ಬಳಿ,ಮೊಟ್ಟೆತಡ್ಕ ಬಸ್ ನಿಲ್ದಾಣದ ಬಳಿ,ಕೆಮ್ಮಿಂಜೆ ಕಟ್ಟೆ ಹಸನ್ ಮನೆ ಪಕ್ಕ,ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿ ಬಳಿ,ಆದರ್ಶ ಆಸ್ಪತ್ರೆಯ ಎದುರು,ಎಪಿಎಂಸಿ ಗೇಟಿನ ಎಡಭಾಗ,ಕೂಟೆಚಾ ಕ್ರಾಸ್ ರಸ್ತೆ ಎಡಭಾಗ,ಕೃಷ್ಣ ನಗರ ಬಸ್ ನಿಲ್ದಾಣ ಹತ್ತಿರ,ಕೆಮ್ಮಾಯಿ ಬಸ್ ನಿಲ್ದಾಣದ ಬಳಿ,ಪಡೀಲು ಬಸ್ ನಿಲ್ದಾಣದ ಬಳಿ, ಬನ್ನೂರು ಕಟ್ಟೆ ಹಾರಾಡಿ ದೇವಸ್ಥಾನದ ಪಕ್ಕ,ಖಾಸಗಿ ಬಸ್ ನಿಲ್ದಾಣದ ಬಳಿ,ಬಾಲವನ ಬಸ್ ನಿಲ್ದಾಣದ ಬಳಿಯಲ್ಲಿ ವ್ಯವಸ್ಥೆ ಮಾಡಲಾಗಿದೆಯೆಂದು ಆದೇಶದಲ್ಲಿ ತಿಳಿಸಿರುತ್ತಾರೆ.

ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗಿಗ್ಗೆ ದ್ರುವ ಕಾಂಪ್ಲೆಕ್ಸ್ ಎದುರು,ನ್ಯೂ ಹರಿಪ್ರಸಾದ್ ಬೊಳುವಾರ್ ಎದುರು,ಎಚ್ಡಿಎಫ್ಸಿ ಕಟ್ಟಡದ ಎದುರು,ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಎದುರು, ಮಾಣಿಲಾ ಕನ್ಸ್ಟ್ರಕ್ಷನ್ ಎದುರು,ಅಂಕಲ್ ಸ್ವೀಟ್ ವಿರುದ್ಧ ದಿಕ್ಕಿನಲ್ಲಿ, ಆರ್.ಎಚ್.ಸೆಂಟರ್ ಎದುರು,ದೇನಾ ಬ್ಯಾಂಕ್ ಎದುರು,ಎಕ್ಸಿಸ್ ಬ್ಯಾಂಕು ಎದುರು ,ನಾರಾಯಣ ನಾಯಕ್ & ಸನ್ಸ್ ವಿರುದ್ದ ದಿಕ್ಕಿನಲ್ಲಿ ,ಸೋಜಾ ಅಲ್ಯುಮಿನಿಯಂ ವಕ್ಸರ್್ ಎದುರು,ಮುತ್ತೂಟ್ ಸೆಕ್ಯುರಿಟಿ ಲಿ.ನ ಬಳಿ ಸಾರ್ವಜನಿಕ ಶೌಚಾಲಯದ ಮುಂಭಾಗ,ಶ್ರೀಧರ ಭಟ್ ರಸ್ತೆ ಬದಿ,ನ್ಯೂಟೈರ್ನಿಂದ ಪದ್ಮಾ ಅಟೋ ಗ್ಯಾಸ್ ವರೆಗೆ,ಹೆಗ್ಡೆ ಆರ್ಕೆಡ್ ಮುಂಭಾಗ, ಜೆ.ಎಂ ಕಟ್ಟಡ ಮುಂಭಾಗ,ಜಿ.ಎಲ್ ಕಾಂಪ್ಲೆಕ್ಸ್ ಮುಂಭಾಗ,ವೆಂಕಟರಮಣ ದೇವಸ್ಥಾನ ಮುಂಭಾಗ,ಧರ್ಮಸ್ಥಳ ಬಿಲ್ಡಿಂಗ್ ಎದುರು,ಮೋಹನ್ ಕೋಲ್ಡ್ ಹೌಸ್ ಎಡಬದಿ,ಎಳ್ತಿಮಾರ್ ಕಟ್ಟಡದ ಎದುರು,ರಾಮನಾಥ ಚೇಂಬರ್ಸ್ ಎದುರು,ಸುಜಾತ ಹೋಟೇಲ್ ಎದುರು,ಕೆನರಾ ಬ್ಯಾಂಕ್ ಎದುರು,ಯುನೈಟೆಡ್ ಹಾರ್ಡ್ ವೇರ್ ಶಾಪ್ ಕಟ್ಟಡ ಎದುರು,ಗಣೇಶ ರೇಡಿಯೋ ಹೌಸ್ ಮುಂಭಾಗ,ದನ್ವಂತರಿ ಆಸ್ಪತ್ರೆ ವಿರುದ್ಧ ದಿಕ್ಕಿನಲ್ಲಿ,ಹರ್ಷ ಬಿಲ್ಡಿಂಗ್ ವಿರುದ್ಧ ದಿಕ್ಕಿನಲ್ಲಿ,ಸಚಿನ್ ಟ್ರೇಡಿಂಗ್ ಕಂಪೆನಿ ವಿರುದ್ಧ ದಿಕ್ಕಿನಲ್ಲಿ,ಮರಿಕೆ ಕ್ಲಿನಿಕ್ ವಿರುದ್ಧ ದಿಕ್ಕಿನಲ್ಲಿ ದರ್ಬೆ ಪ್ರಶಾಂತ್ ವೈನ್ಸ್ ಎದುರು,ದರ್ಬೆ ಸಾರ್ವಜನಿಕ ಶೌಚಾಲಯದ ಮುಂಭಾಗದಿಂದ ಸರ್ವಿಸ್ ಸ್ಟೇಷನ್ ವರೆಗೆ, ಎಪಿಎಂಸಿ ರಸ್ತೆಯಲ್ಲಿ,ಸೂಪರ್ ಕಲೆಕ್ಷನ್ ಶಾಪಿನಿಂದ ಫಾರೆಸ್ಟ್ ಕಚೇರಿ ವರೆಗೆ, ನೆಲ್ಲಿಕಟ್ಟೆ ಅನಿತಾ ಮಿಲ್ ಬಳಿ ಶುಲ್ಕ ಪಾವತಿಮಾಡಿ ಪಾರ್ಕಿಂಗ್ ಮಾಡಬಹುದಾಗಿದೆ.
ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ಭುವನೇಂದ್ರ ಕಲ್ಯಾಣ ಮಂಟಪ ರಸ್ತೆ,ಬೊಳುವಾರು ಏಕಮುಖ ರಸ್ತೆ ಅಂಜನೇಯ ಮಂತ್ರಾಲಯ ಬಳಿಯಿಂದ,ಎಂ.ಟಿ.ರಸ್ತೆ ಬಸ್ ನಿಲ್ದಾಣ ಕಡೆಯಿಂದ ಮಹಮ್ಮಾಯಿ ದೇವಸ್ಥಾನ ಕಡೆಗೆ, ಕೋರ್ಟ್ ರಸ್ತೆ, ಮಾರ್ಕೆಟ್ ಜಂಕ್ಷನ್ನಿಂದ ಹಳೇ ತಾಜ್ಮಹಲ್ ಜಂಕ್ಷನ್ ಕಡೆಗೆ,ಬಲ ತಿರುವು ಇಲ್ಲ ,ಹಾರಾಡಿ ಕೊಂಬೆಟ್ಟು ರಸ್ತೆ ಕಡೆಗೆ ಏಕಮುಖ ರಸ್ತೆಯಾಗಿ ಆದೇಶ ಹೊರಡಿಸಲಾಗಿದೆ.