Wednesday, July 18, 2012

ದ.ಕ.ಜಿ.ಪಂ ಗೆ 15062.47 ಲಕ್ಷ ಅನುದಾನ: ಡಾ.ವಿಜಯ ಪ್ರಕಾಶ್

ಮಂಗಳೂರು, ಜುಲೈ.18 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2012-13ನೇ ಸಾಲಿನ ಯೋಜನೆಯಡಿ ರಾಜ್ಯ ಮತ್ತು ಕೇಂದ್ರದಿಂದ ಒಟ್ಟು 15062.47 ಲಕ್ಷ ರೂ. ಅನುದಾನ ಲಭ್ಯವಾಗಿದ್ದು, ಇದರಲ್ಲಿ ಕೇಂದ್ರದ 6598.40 ಲಕ್ಷ ರೂ., ಹಾಗೂ ರಾಜ್ಯದ 8464.07 ಲಕ್ಷ ರೂ. ಅನುದಾನ ಲಭ್ಯವಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ ಎನ್ ವಿಜಯಪ್ರಕಾಶ್ ತಿಳಿಸಿದ್ದಾರೆ.
ಜುಲೈ 16ರಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಗತಿ ವಿವರಗಳ ಮಾಹಿತಿ ನೀಡಿದ ಸಿಇಒ ಅವರು, ಪ್ರಮುಖ ಇಲಾಖೆಗಳಿಗೆ ಸಾಕಷ್ಟು ಅನುದಾನ ಲಭ್ಯವಿದ್ದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸಕ್ತ ಸಾಲಿನ ವಾಷರ್ಿಕ ಕ್ರಿಯಾ ಯೋಜನೆಯಡಿ ಶಿಕ್ಷಣ ಇಲಾಖೆಗೆ ಒಟ್ಟು 3438.37 ಲಕ್ಷ ರೂ. ಮೀಸಲಿರಿಸಿದ್ದು, ಇದರೊಳಗೆ ಅಂಗವಿಕಲ ಮಕ್ಕಳಿಗೆ ಸಮಗ್ರ ಶಿಕ್ಷಣಕ್ಕೆ 7 ಲಕ್ಷ, ಪ್ರೌಢಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಗೆ 50 ಲಕ್ಷ, ಖಾಸಗಿ ಪ್ರೌಢಶಾಲೆಗಳಿಗೆ ಸಹಾಯಧನ 58 ಲಕ್ಷ, ಗುತ್ತಿಗೆ ಶಿಕ್ಷಕರಿಗೆ ಸಂಭಾವನೆಗೆ 1.50ಲಕ್ಷ ರೂ., ಸರ್ವಶಿಕ್ಷಣ ಅಭಿಯಾನದಡಿ ವೇತನ, ಪೀಠೋಪಕರಣಕ್ಕೆ, ನಿರ್ವಹಣೆಗೆ 1064 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಶಿಕ್ಷಕರ ವೇತನಕ್ಕಾಗಿ 1552 ಲಕ್ಷ ವೇತನಕ್ಕೆ ಮೀಸಲಿರಿಸಿದ್ದು, ಇದಕ್ಕೆ ಕೇಂದ್ರದ ಪಾಲು 224.00 ರಾಜ್ಯದ ಪಾಲು 3214.37 ಲಕ್ಷ ರೂ. ಮೀಸಲಿರಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಕ್ರೀಡೆಗಳು ಮತ್ತು ಯುವಜನಸೇವೆಯಡಿ 56.62 ಲಕ್ಷ ರೂ.ಗಳನ್ನು ಮೀಸಲಿಡಲಾಗಿದ್ದು, ಕ್ರೀಡಾಂಗಣ ನಿರ್ವಹಣೆಗೆ 2 ಲಕ್ಷ ರೂ., ಕ್ರೀಡಾ ಶಾಲೆಗೆ 3.50 ಲಕ್ಷ ರೂ., ಕುಸ್ತಿದಾರರಿಗೆ ಆರ್ಥಿಕ ಸಹಾಯಧನಕ್ಕೆ 30,000ರೂ., ತಾಲೂಕು ಪಂಚಾಯತ್ ಮಟ್ಟದಲ್ಲಿ ಯುವಜನಕ್ರೀಡಾ ಖೇಲ್ ಅಭಿಯಾನಕ್ಕೆ ಒಟ್ಟು 30 ಲಕ್ಷ ರೂ. ಮೀಸಲಿಡಲಾಗಿದೆ. ಇದರಲ್ಲಿ ರಾಜ್ಯ ಯೋಜನೆ 6 ಲಕ್ಷ,ಕೇಂದ್ರದ್ದು 24 ಲಕ್ಷ ರೂ. ಮೀಸಲಿರಿಸಿದೆ.
ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು, ಗ್ರಾಮೀಣ ಆರೋಗ್ಯಕ್ಕೆ 159.50 ಲಕ್ಷ ರೂ.ಗಳಿವೆ. ಇದನ್ನು ಆರೋಗ್ಯ ಇಲಾಖೆ ಕಟ್ಟಡ ರಿಪೇರಿ, ಸಲಕರಣೆ ದುರಸ್ತಿ, ಕಾಮಗಾರಿಗೆ, ತಾಲೂಕು ಮಟ್ಟದ ಆಸ್ಪತ್ರೆಗಳ ನಿರ್ವಹಣೆಗೆ 6 ಲಕ್ಷ ರೂ., ಗಳಿವೆ. 78 ಲಕ್ಷ ರೂ.ಗಳನ್ನು ವೇತನಕ್ಕೆ ಬಳಸಲಾಗುವುದು. ಭಾರತೀಯ ವೈದ್ಯ ಪದ್ದತಿ ಹೋಮಿಯೋ ಮತ್ತು ಆಯುರ್ವೇದಕ್ಕೆ 35 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಕುಟುಂಬ ಕಲ್ಯಾಣಕ್ಕೆ 1584.80 ರೂ.ಗಳು, ಗ್ರಾಮೀಣಾಭಿವೃದ್ಧಿಯಡಿ ಕುಡಿಯುವ ನೀರಿಗಾಗಿ 47ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಸಮಾಜ ಕಲ್ಯಾಣಕ್ಕೆ 588.65 ಲಕ್ಷ ರೂ. ಮೀಸಲಿರಿಸಿದ್ದು, ಸ್ಕಾಲರ್ ಷಿಪ್, ವಿದ್ಯಾರ್ಥಿನಿಲಯಗಳ ನಿರ್ವಹಣೆ, ಊಟ, ವಸತಿ ಯೋಜನೆಗಳಿಗೆ ಈ ಹಣ ಬಳಕೆಯಾಗಲಿದೆ. ಅಂತರ್ ಜಾತಿ ವಿವಾಹ, ಅಸ್ಪೃಶ್ಯತಾ ನಿವಾರಣೆಗೆ 9ಲಕ್ಷ ರೂ.ಗಳು ಮೀಸಲಿರಿಸಿದೆ. ಈ ಇಲಾಖೆಗೆ ರಾಜ್ಯದಿಂದ 305.90 ಮತ್ತು ಕೇಂದ್ರದಿಂದ 282.75 ಲಕ್ಷ ರೂ.ಗಳಿವೆ.
ಪರಿಶಿಷ್ಟ ಪಂಗಡದ ಕಾಲನಿ ಅಭಿವೃದ್ಧಿಗೆ, ಮೂಲಸೌಕರ್ಯ ಒದಗಿಸಲು 85 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗೆ 290.86 ಲಕ್ಷ ರೂ., ಗಳಲ್ಲಿ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನಕ್ಕೆ ಬಳಕೆಯಾಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2609.08 ಲಕ್ಷ ಗಳನ್ನು ಮೀಸಲಿರಿಸಿದ್ದು, ಕೇಂದ್ರದ 1974.32 ಮತ್ತು ರಾಜ್ಯದ 634.76 ರೂ.ಗಳಿವೆ. ಅಂಗನವಾಡಿಗಳ ನಿರ್ವಹಣೆಗೆ 65 ಲಕ್ಷ ರೂ., ನಿರ್ಗತಿಕ ಕುಟೀರಕ್ಕೆ 7.30 ಲಕ್ಷರೂ. ಶಿಶು ಕಲ್ಯಾಣಕ್ಕೆ, ಗೌರವಧನಕ್ಕೆ 562.20 ಲಕ್ಷ ರೂ. ಮೀಸಲಿಟ್ಟಿದೆ.
ಪೌಷ್ಠಿಕ ಆಹಾರ ಯೋಜನೆಯಡಿ 1607.00 ಲಕ್ಷ ರೂ., ಗಳಲ್ಲಿ ಕೇಂದ್ರದಿಂದ 699ಲಕ್ಷ, ರಾಜ್ಯದ್ದು 908 ಲಕ್ಷ ರೂ. ಬಿಡುಗಡೆಯಾಗಿದೆ. ಕೃಷಿಗೆ 65.19 ಲಕ್ಷ ರೂ. ಮೀಸಲಿರಿಸಿದ್ದು, ಕೇಂದ್ರದ ಪಾಲು 3.60 ಲಕ್ಷ, ರಾಜ್ಯದ್ದು 61.45 ಲಕ್ಷ ರೂ., ಗಳಲ್ಲಿ ರೈತರಿಗೆ ಸಹಾಯಧನ, ಕೃಷಿ ಮೇಳ, ಸಾವಯವ ಕೃಷಿ, ಹನಿನೀರಾವರಿ, ಕೃಷಿ ಅಭಿವೃದ್ಧಿಗೆ ಬಳಕೆಯಾಗಲಿದೆ.
ತೋಟಗಾರಿಕೆ ವಲಯಕ್ಕೆ 42.11 ಲಕ್ಷ ರೂ. ಮೀಸಲಿರಿಸಿದ್ದು, ನರ್ಸರಿ ನಿರ್ವಹಣೆ ಮತ್ತು ಕಟ್ಟಡಕ್ಕೆ, ಶೈತ್ಯಾಗಾರಕ್ಕೆ ಧನಸಹಾಯ, ರೈತರಿಗೆ ತರಬೇತಿ, ಜೇನುಸಾಕಾಣಿಕೆಗೆ 3 ಲಕ್ಷ ರೂ.ಗಳನ್ನು ಮೀಸಲಿರಿಸಿದೆ.
ಪಶುಸಂಗೋಪನೆಗೆ ಒಟ್ಟು 267.57 ಲಕ್ಷ, ಕೇಂದ್ರದಿಂದ 5.48 ಲಕ್ಷ, ರಾಜ್ಯದ 262.9 ಲಕ್ಷ ರೂ., ಜಾನುವಾರು ರೋಗ ನಿಯಂತ್ರಣಕ್ಕೆ 12 ಲಕ್ಷ ರೂ., ಪಶುವೈದ್ಯ ಶಾಲೆ ಅಭಿವೃದ್ಧಿಗೆ 188.17 ಲಕ್ಷ ರೂ., ಮೀನುಗಾರಿಕೆಗೆ 33 ಲಕ್ಷ ರೂ. ಮೀಸಲಿರಿಸಿದ್ದು ಮೀನು ಮಾರಾಟಕ್ಕೆ ಸಹಾಯಧನ 8.20 ಲಕ್ಷ ರೂ., ಮೀಸಲಿರಿಸಿದೆ.