Wednesday, July 18, 2012

ಇಂಗುಗುಂಡಿ, ತೆರೆದ ಬಾವಿ ಎಚ್ಚರ ವಹಿಸಿ: ಸಿಇಒ

ಮಂಗಳೂರು, ಜುಲೈ. 18 : ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಇಂಗುಗುಂಡಿ, ತೆರೆದ ಬಾವಿ, ಅನುಪಯುಕ್ತ ಕೊಳವೆಬಾವಿ ಗಳಲ್ಲಿ ಮಕ್ಕಳು ಬೀಳದಂತೆ ಮತ್ತು ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಾಧ್ಯವಿದ್ದಲ್ಲಿ ಬೇಲಿ ಹಾಕುವಂತಹ ಕ್ರಮಗಳು, ಮುನ್ನೆಚ್ಚರಿಕೆ ಫಲಕಗಳನ್ನು ಹಾಕಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಸಂಬಂಧ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಮತ್ತು ಇಒಗಳ ನೇತೃತ್ವದಲ್ಲಿ ಪಿಡಿಒ ಗಳು ಮತ್ತು ಸ್ಥಳೀಯ ಇಂಜಿನಿಯರ್ ಗಳು ಕ್ರಮವಹಿಸಬೇಕೆಂದು ಸಿಇಒ ಹೇಳಿದರು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಇಲಾಖೆಗಳ ಸಮನ್ವಯದೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಿಇಒ ಅವರು ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಪೂರಕವಾಗಿ ಸಾಮಾಜಿಕ ಅರಣ್ಯ, ತೋಟಗಾರಿಕೆ, ಸಣ್ಣ ನೀರಾವರಿ, ಕೃಷಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯೋಜನೆಗಳನ್ನು ರೂಪಿಸಿ ಜನರಿಗೆ ಸೌಲಭ್ಯ ನೀಡಿಕೆಗಳಾಗಬೇಕೆಂದು ಸಿಇಒ ಅವರು ಹೇಳಿದರು.