Thursday, July 19, 2012

5,24,828 ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ

ಮಂಗಳೂರು.ಜುಲೈ.19: ನೆಹರು ಯುವ ಕೇಂದ್ರದ 2012-13ನೇ ಸಾಲಿನ 5,24,828.00 ರೂ.ಗಳ ಕ್ರಿಯಾ ಯೋಜನೆಗೆ ಇಂದು ಅಪರ ಜಿಲ್ಲಾಧಿಕಾರಿ ಕೆ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಅನು ಮೋದನೆ ನೀಡಲಾಯಿತು.
ಪ್ರತೀ ಸಾಲಿನಂತೆ ಈ ಸಾಲಿನಲ್ಲಿಯೂ ಅವರ ನಿಗದಿತ ಕಾರ್ಯ ಕ್ರಮಗಳ ಪಟ್ಟಿಯನ್ನು ಸಭೆಗೆ ವಿವರಿಸಿದ ನೆಹರು ಯುವಕೇಂದ್ರದ ಅಧಿಕಾರಿ ಸಿ ಜೆ ಎಫ್ ಡಿ ಸೋಜಾ ಅವರು, ಯಶಸ್ವಿಯಾಗಿ ಯುವಕ ಮತ್ತು ಯುವತಿ ಮಂಡಲಗಳ ಸಹಕಾರದಿಂದ ಕಾರ್ಯಕ್ರಮ ಆಯೋಜಿ ಸುವುದಾಗಿ ನುಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಉಳಿದ ಕಾರ್ಯಕ್ರಮಗಳಿಗಿಂತ ಎಲ್ಲ ಯುವಕ ಮಂಡಲಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
ಯುವಕ ಸಂಘಟನೆಗಳು ಮಾದರಿ ಕಾರ್ಯಕ್ರಮಗಳನ್ನು ನೀಡುವಂತಾಗಬೇಕು. ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ಇತರ ಇಲಾಖೆಗಳು ಮಾಡುವುದರಿಂದ, ಸಾಮಾಜಿಕ ಚಟುವಟಿಕೆಗಳಲ್ಲಿ ಎನ್ ವೈ ಕೆ ತಂಡಗಳು ಖುದ್ದು ಪಾತ್ರಧಾರಿಗಳಾಗಬೇಕೆಂದರು. ಯುವಕ, ಯುವತಿ ಮಂಡಲಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.