Friday, October 5, 2012

ಸುರಕ್ಷಾ ಜೀವನ ಆಂದೋಲನ


ಮಂಗಳೂರು,ಅಕ್ಟೋಬರ್.05: ಜಿಲ್ಲಾ ಆರೋಗ್ಯ ಕೇಂದ್ರ,ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ,ಪ್ರಾಥಮಿಕ ಆರೋಗ್ಯ ಕೆಂದ್ರ ಮತ್ತು ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸುರಕ್ಷಾ ಜೀವನ ಆಂದೋಲನ ಇದರ ಅಂಗವಾಗಿ ಆರೋಗ್ಯ ತಪಾಸಣರ ಮತ್ತು ಆಪ್ತ ಸಮಾಲೋಚನಾ ಶಿಬಿರ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.