Wednesday, October 31, 2012

ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಜಿಲ್ಲಾಡಳಿತದ ಹೆಜ್ಜೆ

ಮಂಗಳೂರು,ಅಕ್ಟೋಬರ್. 31.: ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವಲ್ಲಿ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರಪಾಲಿಕೆ ಹಲವು ವಿನೂತನ ಪರಿಕ್ರಮಗಳನ್ನು ಆರಿಸಿಕೊಂಡಿದ್ದು, ಜನಜಾಗೃತಿಗೆ ಹೆಚ್ಚಿನ ಮಹತ್ವ ನೀಡಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಮಹಾ ನಗರ ಪಾಲಿಕೆ ಆಯು ಕ್ತರಾದ ಡಾ. ಹರೀಶ್ ಕುಮಾರ್, ಪಾಲಿಕೆಯ ಪರಿಸರ ಇಂಜಿನಿ ಯರ ಗಳು ಪಾಲಿಕೆ ಡಾಕ್ಟರ್ ಸುದ ರ್ಶನ ಸೇರಿ ದಂತೆ ಎಲ್ಲ ಇಲಾಖಾ ಧಿಕಾರಿ ಗಳು ಕದ್ರಿ ಮಾರ್ಕೆಟ್ ನಲ್ಲಿ ಗ್ರಾಹ ಕರಿಗೆ ಪ್ಲಾಸ್ಟಿಕ್ ಬಳಸ ದಂತೆ ಅರಿವು ಮೂಡಿ ಸುವ ನಿಟ್ಟಿನಲ್ಲಿ ಬಟ್ಟೆಯ ಕೈ ಚೀಲ ಗಳನ್ನು ಹಂಚಿ ದರು.
ಕಸ ವಿಲೇ ವಾರಿ, ತ್ಯಾಜ್ಯ ವಿಲೇ ವಾರಿ ಯಲ್ಲಿ ಪ್ಲಾಸ್ಟಿಕ್ ನಿಂದಾಗಿ ಸವಾ ಲುಗ ಳನ್ನು ಎದು ರಿಸುತ್ತಿದ್ದು, ಜಿಲ್ಲೆಯ ಉದ್ಯ ಮಿಗಳು ಮಾರ್ಕೆಟ್ ನವರು, ಸಂಘ ಸಂಸ್ಥೆಗಳು ಜಿಲ್ಲಾ ಡಳಿತದ ಮನವಿಗೆ ಸ್ಪಂದಿಸುತ್ತಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಹೇಳಿದರು.