Monday, October 22, 2012

ಏಳು ಹೊಸ ಪೊಲೀಸ್ ಠಾಣೆಗಳು: ಉಪ ಮುಖ್ಯಮಂತ್ರಿ ಅಶೋಕ್

ಮಂಗಳೂರು,ಅಕ್ಟೋಬರ್.22:  ರಾಜ್ಯದಲ್ಲಿ  ಸಾರ್ವಜನಿಕರ ದೂರು ದುಮ್ಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾಗೃತವಾಗಿದ್ದು, ಹೊಸದಾಗಿ 7 ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿಗಳೂ ಹಾಗೂ ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್  ತಿಳಿಸಿದರು.
                  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ಪುಂಜಾಲ ಕಟ್ಟೆ ಯಲ್ಲಿ ಅವರು  48 ಲ.ರೂ ವೆಚ್ಚ ದಲ್ಲಿ ನಿರ್ಮಾಣ ಗೊಂಡ  ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು  ಉದ್ಘಾ ಟಿಸಿ ಅವರು ಮಾತ ನಾಡಿದರು. ಈ ಭಾಗದ ಜನರ ಅನು ಕೂಲಕ್ಕಾಗಿ, ಕಾನೂನಿನ ರಕ್ಷಣೆ ಒದ ಗಿಸುವ ಉದ್ದೇಶ ದಿಂದ ಠಾಣೆಯ ಹೊಸ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವುದಾಗಿ ಅವರು ತಿಳಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜ್ಯದ ಕರಾವಳಿ ಪ್ರದೇಶದ 300 ಕಿ.ಮೀ.ವ್ಯಾಪ್ತಿ ಯ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದ್ದು ನಕ್ಸಲ್ ಚಟುವಟಿಕೆ, ನುಸುಳುಕೋರರು ಹಾಗೂ ಭಯೋತ್ಪಾದಕರ ನುಸುಳುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯನ್ನು ಹಾಗೂ ಗುಪ್ತಚರ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.ಸರ್ಕಾರ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸುತ್ತಿದೆ, ರಾಜ್ಯದಲ್ಲಿ ಇದೇ ಮೊದಲಬಾರಿಗೆ ಆರಂಭಿಸಿರುವ ಇಂಡಸ್ಟ್ರಿಯಲ್  ಸೆಕ್ಯೂರಿಟಿ ಫೋರ್ಸ್ ಗೆ  2000ಕ್ಕೂ ಅಧಿಕ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಕೈಗಾರಿಕೆ ಗಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಸಿಬ್ಬಂದಿಗಳ ಸೇವೆಯನ್ನು   ಬೃಹತ್ ಅಣೆಕಟ್ಟುಗಳು, ಅಣುಸ್ಥಾವರ ಹಾಗೂ ಐಟಿ ಕಂಪೆನಿಗಳ ರಕ್ಷಣೆಗೆ ಬಳಸಿಕೊಳ್ಳುವುದಾಗಿ ಅವರು ತಿಳಿಸಿದರು. ಈ ಹಿಂದೆ ಇಂತಹಾ ರಕ್ಷಣಾ ಸೇವೆಗಾಗಿ ಕೇಂದ್ರ ಸರ್ಕಾರವನ್ನು ಆಶ್ರಯಿಸಬೇಕಾಗಿತ್ತು ಅಥವಾ ಪೊಲೀಸರ ಸೇವೆ ಪಡೆಯಬೇಕಾಗಿತ್ತು. ಇದರಿಂದ ಪೊಲೀಸ್ ಸಿಬ್ಬಂದಿಗಳ  ಕೊರೆತೆಯೂ ತಲೆದೋರುತ್ತಿತ್ತು. ಆದರೆ ಇನ್ನುಮುಂದೆ ಆಸಮಸ್ಯೆ ಇಲ್ಲ ಎಂದವರು ತಿಳಿಸಿದರು.
 ಬೆಂಗ ಳೂರಿನಲ್ಲಿ ತಲೆ ದೋರಿ ರುವ ತ್ಯಾಜ್ಯವಿಲೇ ವಾರಿ ಸಮ ಸ್ಯೆಯ ಬಗ್ಗೆ  ಸುದ್ದಿ ಗಾರರ ಪ್ರಶ್ನೆಗೆ ಉತ್ತ ರಿಸಿದ ಅವರು, ತ್ಯಾಜ್ಯ ವಿಲೇ ವಾರಿ ಸಮಸ್ಯೆ ಯನ್ನು ಶಾಶ್ವತ ವಾಗಿ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಗಳನ್ನು ಕೈ ಗೊಳ್ಳ ಲಾಗಿದೆ.ತ್ಯಾಜ್ಯ ಗಳನ್ನು ವೈಜ್ಞಾ ನಿಕವಾಗಿ ಸಂಸ್ಕ ರಿಸುವ ನಿಟ್ಟಿನಲ್ಲಿ ಕೆಲವೊಂದು  ಖಾಸಗಿ ಕಂಪೆನಿಗಳಿಗೆ ಜವಬ್ದಾರಿ ವಹಿಸಲಾಗಿದ್ದು, ಈ ಬಗೆಗಿನ ಪ್ರಕ್ರಿಯೆ ಅನುಷ್ಠಾನ ದ ಹಂತದಲ್ಲಿದೆ ಎಂದವರು ಹೇಳಿದರು.
ಶಾಸಕ ರಾದ ಬಿ.ರಮಾನಾಥ ರೈ , ಕೆ.ವಸಂತ ಬಂಗೇರ , ಮಲ್ಲಿಕಾ ಪ್ರಸಾದ್  ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಕುಮ ಪಚಾವ್, ನಿರ್ದೇಶಕ ಎಮ್.ಎನ್.ರೆಡ್ಡಿ,  ಪಶ್ಚಿಮ ವಲಯ ಐಜಿಪಿ ಪ್ರತಾಪ ರೆಡ್ಡಿ ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ,ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.`ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ , ಪೋಲಿಸ್ ಆಯುಕ್ತ ಮನೀಷ್ ಕರ್ಬೀಕರ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ,ಸಹಾಯಕ ಅಧೀಕ್ಷಕ ಅನುಚೇತ್ ಎಂ.ಎನ್ ,ಬೆಳ್ತಂಗಡಿ ವೃತ್ತ ನಿರೀಕ್ಷಕ ಭಾಸ್ಕರ ರೈ,ಪುಂಜಾಲಕಟ್ಟೆ ಠಾಣಾಧಿಕಾರಿ ಜಯಾನಂದ  ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
  

ರಾಜ್ಯ ಉಪಮುಖ್ಯಮಂತ್ರಿ ಆರ್.ಅಶೋಕ್  ಬಂಟ್ವಾಳ ನಗರ ಠಾಣಾ ನೂತನ ಕಟ್ಟಡವನ್ನು ಉಧ್ಘಾಟಿಸಿದರು

ಶಾಸಕ ಬಿ.ರ,ಮಾನಾಥ ರೈ, ಶಾಸಕಿ ಮಲ್ಲಿಕಾ ಪ್ರಸಾದ್,  ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ತಾಲೂಕು ಪಂಚಾಯತು ಅಧ್ಯಕ್ಷೆ ಲಲಿತಾ ಎಸ್.ನಾಯ್ಕ, ಉಪಾಧ್ಯಕ್ಷ ಆನಂದ ಎ., ಪುರಸಭಾದ್ಯಕ್ಷ ದಿನೇಶ ಭಂಡಾರಿ, ಪೋಲೀಸ್ ಮಹಾನಿರ್ದೇಶಕ ಲಾಲ್ ರುಖುಮ ಪಚಾವ್, ಕೆ.ಎಸ್.ಪಿ.ಹೆಚ್.ಸಿ. ವ್ಯವಸ್ಥಾಪಕ ಎಮ್.ಎನ್.ರೆಡ್ಡಿ, ಪಶ್ಮಿಮ ವಲಯ ಪೋಲೀಸ್ ಮಹಾನಿರೀಕ್ಷಕ ಪ್ರತಾಪ್ ರೆಡ್ಡಿ, ಮಂಗಳೂರು ಪೋಲೀಸ್ ಕಮೀಷನರ್ ಮನೀಷ್ ಕರ್ಬೀಕರ್, ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್, ಸಹಾಯಕ್ ಪೋಲೀಸ್ ಅಧೀಕ್ಷಕ ಅನುಚೇತ್ ಎಂ.ಎನ್., ಪೋಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್, ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಪ್ರಸಾದ್ ಮೊದಲಾದವರಿದ್ದರು.
ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಗಳಾಗಿ ರೂಪುಗೊಳ್ಳಬೇಕು. ಪೋಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ, ಜನರ ಮನಸ್ಸನ್ನು ಗೆಲ್ಲುವ- ಪರಿವರ್ತಿಸುವ ಕೆಲಸವನ್ನು ಮಾಡಬೇಕೆಂದು ಈ ಸಂದರ್ಭದಲ್ಲಿ  ಉಪಮುಖ್ಯಮಂತ್ರಿಗಳು ಕರೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಉಪಮುಖ್ಯಮಂತ್ರಿಗಳು ಟ್ರಾಫಿಕ್ ಸಮಸ್ಯೆಯನ್ನುನಿವಾರಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಟ್ರಾಫಿಕ್ ಪೋಲೀಸ್ ಠಾಣೆಗಳ ಸ್ಥಾಪನೆಗೆ ಬೇಡಿಕೆ ಇದ್ದು ಆದ್ಯತೆಯ ನೆಲೆಯಲ್ಲಿ ಮಂಜೂರುಗೊಳಿಸಲಾಗುವುದು.
ಭಯೋತ್ಪಾದಕರು ಹಾಗೂ ನುಸುಳುಕೋರರನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆಯನ್ನು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಮುಂಬೈ ದಾಳಿ ಮರುಕಳಿಸದಂತೆ ಎಲ್ಲಾ ರೀತಿಯ ರಕ್ಷಣಾ ತಂತ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಭಯೋತ್ಪಾದನೆ ನಿಗ್ರಹಕ್ಕಾಗಿ ಕೇಂದ್ರ ಸರಕಾರದ ಅನುದಾನವನ್ನು  ಬಳಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ. ಕಾನೂನು ಸುವ್ಯವಸ್ತೆ ಕಾಪಾಡಲು ರಾಜ್ಯ ಪೋಲೀಸ್ ಇಲಾಖೆ ಹೆಚ್ಚಿನ ಆಧ್ಯತೆ ನೀಡಿದದ್ದು ಕಾವಲು ಪಡೆಗೆ 3000 ಮಂದಿಯ ಹೊಸ ನೇಮಕಾತಿ ಪ್ರಕ್ರಿಯೆಯು ಅಂತಮ ಹಂತದಲ್ಲಿದೆ.
ರಾಜ್ಯದ ಪೋಲೀಸ್ ಠಾಣೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು ಸಶಸ್ರ್ತ ಸಹಿತ ಎಲ್ಲಾ ರೀಯ ಮೂಲಭೂತ ಸೌಲಭ್ಯಗಳ ಒದಗಣೆಯೊಂದಿಗೆ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.