Friday, October 12, 2012

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಅಕ್ಟೋಬರ್.12 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಸ್ಥಳೀಯವಾಗಿ ತರಕಾರಿ ಬೆಳೆಯುವ ನಿಟ್ಟಿನಲ್ಲಿ ಉತ್ತಮ ಮಾದರಿಗಳನ್ನು ತೋಟಗಾರಿಕಾ ಇಲಾಖೆ ನೀಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಭರತ್ ಲಾಲ್ ಮೀನಾ ಅವರು ಹೇಳಿದರು.
ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ಜಿಲ್ಲೆಯ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಜಿಲ್ಲೆಗೆ ತರ ಕಾರಿ ಪೂರೈಕೆ ಇತರ ಜಿಲ್ಲೆ ಗಳಿಂ ದಾಗು ತ್ತಿದ್ದು,  ಸಾಮಾನ್ಯ ಜನರ ಹಿತ ವನ್ನು ಗಮ ನದಲ್ಲಿ ರಿಸಿ, ನೆರ ವಾಗುವ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣ ಮಟ್ಟದ ತರಕಾರಿ ಪೂರೈಸಲು ಇಲಾಖೆ ಕಾರ್ಯೋನ್ಮುಖವಾಗಬೇಕಿದೆ ಎಂದ ಕಾರ್ಯದರ್ಶಿಗಳು, ಆಸಕ್ತ ಕೃಷಿಕರೊಂದಿಗೆ ವ್ಯವಹರಿಸಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಸಬೇಕೆಂದು  ಎಂದು ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕಾ ಇಲಾಖೆಯಡಿ ಯೋಜನೆಗಳಿಗೆ ಸಂಬಂಧಿಸಿದಂತೆ ತುರ್ತು ನಿರ್ಧಾಗಳನ್ನು ಕೈಗೊಳ್ಳಲು ಪೂರಕವಾಗಿ ಇಲ್ಲಿನ ಹಿರಿಯ ಅಧಿಕಾರಿಗೆ ಉಪನಿರ್ದೇಶಕರ ಪ್ರಭಾರ ವಹಿಸಿ ಎಂದು ತೋಟಗಾರಿಕಾ ಇಲಾಖಾ ಹಿರಿಯ ಅಧಿಕಾರಿಗಳಲ್ಲಿ ಕೋರಿದರು. ಇದಲ್ಲದೆ ಸಮಾಜ ಕಲ್ಯಾಣ, ಜಿಲ್ಲಾ ಪಂಚಾಯತ್ನ ವಸತಿ ಯೋಜನೆ ಸಂಬಂಧದ  ಇಲಾಖೆಗಳ ಸಮಸ್ಯೆಗಳಿಗೆ ಸ್ಪಂದಿಸಲು ಸಭೆಯ ಸಂದರ್ಭದಲ್ಲೇ ಇಲಾಖಾ ಮುಖ್ಯಸ್ಥರೊಡನೆ ದೂರವಾಣಿ ಮೂಲಕ ಮಾತನಾಡಿ ಪರಿಹಾರ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಗೈರು ಹಾಜರಾದುದಕ್ಕೆ ನೋಟೀಸ್ ನೀಡಲು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಕಾರ್ಯರ್ಶಿಗಳು ನಗರದೊಳಗಿನ ಸರ್ಕಾರಿ ವಸತಿಗೃಹಗಳ ಪ್ರದೇಶವನ್ನು ಸಮೀಕ್ಷೆ ಮಾಡಿ ಈಗಿರುವ ವಸತಿ ಗೃಹಗಳ ಬದಲಿಗೆ ಬಹುಮಹಡಿ ಕಟ್ಟಡ ನಿರ್ಮಿಸಿ ಉಳಿದ ಜಾಗದಲ್ಲಿ ಕ್ರೀಡಾ ಚಟುವಟಿಕೆಗೆ ಮೈದಾನ ನಿರ್ಮಿಸುವ ಸಾಧ್ಯತೆ ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆ ನಿರ್ಮಾಣಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಕಾರ್ಯದರ್ಶಿಗಳು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಮಯಮಿತಿ ನಿಗದಿಪಡಿಸಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿ ಎಂದರು.
ರಂಗ ಮಂದಿರ ನಿರ್ಮಾಣ ಸಂಬಂದ ಕಾಮ ಗಾರಿ ಯನ್ನೂ ಶೀಘ್ರವೇ ಆರಂ ಭಿಸಲು ಸೂಚಿ ಸಿದ ಕಾರ್ಯ ದರ್ಶಿ ಗಳು, ಪಿಲಿ ಕುಳ ದಲ್ಲಿ ನಿರ್ಮಾ ಣವಾ ಗಲಿ ರುವ  ಜಾನ ಪದ ಲೋಕ ಅಭಿ ವೃದ್ಧಿಯ ಬಗ್ಗೆ ಪರಿ ಶೀಲಿ ಸಿದರು. ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಗೆ ಯೂರಿಯಾ ಪ್ರಮಾಣವನ್ನು 200 ರಿಂದ 800 ಟನ್ ಹೆಚ್ಷಿಸುವಂತೆ ಕೋರಿದ ಅವರು, ಸ್ಥಳೀಯ ಅಧಿಕಾರಿಗಳಿಗೆ ಸುಫಲಾ ಶೇಖರಣೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ರೂಪಿಸಲು ಮಾರ್ಗದರ್ಶನ ನೀಡಿದರು. ಎಪಿಎಂಸಿ ಕಟ್ಟಡಗಳನ್ನು ಅಭಿವೃದ್ಧಿಪಡಿಸಿ ಸಾಮಾನ್ಯ ಕೃಷಿ ಚಟುವಟಿಕೆಗಳಿಗೆ ಪೂರಕ ಕಾರ್ಯಕ್ರಮ ರೂಪಿಸಿ ಎಂದರು.
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪಡಿತರ ಚೀಟಿಗೆ ಸಂಬಂಧಿಸಿದಂತೆ  ಜನರ ಅನುಕೂಲಕ್ಕಾಗಿ ಪಾಲಿಕೆ ಕಚೇರಿ, ಸುರತ್ಕಲ್ ಮಹಾನಗರಪಾಲಿಕೆ ವಿಭಾಗ, ಉಳ್ಳಾಲದಲ್ಲೂ ಘಟಕಗಳನ್ನು ತೆರೆದು ನೋಂದಣಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವವಾಗದಂತೆ ವಿವಿಧ ಯೋಜನೆಗಳಡಿ ಸಮಗ್ರ ಜಲ ಯೋಜನೆ ಶೀಘ್ರವಾಗಿ ಕಾಯರ್ಾನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯತ್ನ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ಸೂಚಿಸಿದರು. ಅವು ಕೆರೆ ಅಭಿವೃದ್ಧಿ, ಕಿಂಡಿ ಅಣೆಕಟ್ಟು, ಜಲಸಮೃದ್ಧಿ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳಾಗಿರಬಹುದು ಎಲ್ಲ ಯೋಜನೆಗಳನ್ನು ಒಟ್ಟುಗೂಡಿಸಿ ನೀರು ಸಮಸ್ಯೆ ಯಾಗದಂತೆ ಕಾರ್ಯರೂಪಕ್ಕೆ ತನ್ನಿ ಎಂದರು.
ಮಲೇರಿಯ ನಿಯಂತ್ರಣ ಕ್ರಮಗಳು ನಿರಂತರವಾಗಿರಲಿ ಎಂದ ಕಾರ್ಯದರ್ಶಿಗಳೂ, ಪರಿಸರ ಪ್ರವಾಸೋದ್ಯಮದಡಿ ಕಾಡು ಬೆಳೆಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.