Tuesday, October 23, 2012

ಅಭಿವೃದ್ಧಿಯಲ್ಲಿ ತಾರತಮ್ಯ ಇಲ್ಲ: ಸಿ ಟಿ ರವಿ


 2660 ಫಲಾನುಭವಿಗಳಿಗೆ 478.20 ಲಕ್ಷ ರೂ. ಸಾಲಸೌಲಭ್ಯ ವಿತರಣೆ
ಮಂಗಳೂರು, ಅಕ್ಟೋಬರ್. 23:- ರಾಜ್ಯದ ಎಲ್ಲ ಸಮಸ್ತ ಹಿತವನ್ನು ಗಮನದಲ್ಲಿರಿಸಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ  ಸಿ ಟಿ ರವಿ ಅವರು ಹೇಳಿದ್ದಾರೆ.
ಇಂದು ಕರ್ನಾ ಟಕ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗಮ 2012-13ನೇ ಸಾಲಿನ ವಿವಿಧ ಸಾಲ ಯೋಜ ನೆಗ ಳಡಿ ಮಂಗ ಳೂರು, ಬಂಟ್ವಾಳ ಮತ್ತು ಬೆಳ್ ತಂಗಡಿ ವಿಧಾನ ಸಭಾ ಕ್ಷೇತ್ರಗಳ ಫಲಾ ನುಭ ವಿಗಳಿಗೆ ಸಾಲ ಸೌಲಭ್ಯ ಗಳ ಚೆಕ್ ವಿತ ರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಂಟ್ವಾಳದ ಬ್ರಹ್ಮಶ್ರೀ ನಾರಾ ಯಣ ಗುರು ಸಭಾ ಭವನ ದಲ್ಲಿ ಈ ಸಂಬಂಧ ಆಯೋ ಜಿಸ ಲಾದ ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು. ಪೂರ್ವಾಹ್ನ ಬಂಟ್ವಾ ಳದಲ್ಲಿ ಆಯೋ ಜಿಸ ಲಾದ ಸಭಾ ಕಾರ್ಯ ಕ್ರಮ ದಲ್ಲಿ 1515 ಫಲಾನು ಭವಿಗಳಿಗೆ 247 ಲಕ್ಷ ರೂ.ಗಳ ಸಾಲಸೌಲಭ್ಯ ವಿತರಿಸಲಾಯಿತು.
ಸ್ವಾವಲಂಬಿಗಳಾಗಿ ಬದುಕಲು ನಿಗಮದ ಮೂಲಕ ಸರ್ಕಾರ ಅಲ್ಪಸಂಖ್ಯಾತ ಅರ್ಹ ಫಲಾನುಭವಿಗಳನ್ನು ಆರಿಸಿ ಸೌಲಭ್ಯ ವಿತರಿಸುತ್ತಿದ್ದು, ಸಾಲವನ್ನು ದುಡಿಮೆಯ ಬಂಡವಾಳವನ್ನಾಗಿಸಿ ಎಂದು ಸಲಹೆ ಮಾಡಿದರು. ದುಡಿಮೆ ಮಾತ್ರ ನಮಗೆ ಉತ್ತಮ ಬದುಕನ್ನು ಕಟ್ಟಿಕೊಡಲು ಸಾಧ್ಯ ಎಂದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ 4ರಿಂದ 6ಪಟ್ಟು ಹೆಚ್ಚು ಅನುದಾನ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದೆ. ಮಾಜಿ ಮುಖ್ಯ ಮಂತ್ರಿ  ಡಿ ವಿ ಸದಾ ನಂದ ಗೌಡ ಅವರ ಅವಧಿ ಯಲ್ಲಿ ಬೆಂಗ ಳೂರಿನ ಹೆಗಡೆ ನಗರ ದಲ್ಲಿ ಹಜ್ ಘರ್ ನಿರ್ಮಾಣ ಕ್ಕಾಗಿ 50 ಕೋಟಿ ರೂ. ಬಿಡು ಗಡೆ ಮಾಡಿದೆ ಎಂದರು. ಎಲ್ಲರೂ ವಿದ್ಯಾ ವಂತರಾಗಿ; ಮಾಜಿ ರಾಷ್ಟ್ರ ಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಮಾದರಿ ಯನ್ನಾ ಗಿಸಿ ಜೀವನ ದಲ್ಲಿ ಮುಂದೆ ಬನ್ನಿ ಎಂದು ಶುಭ ಹಾರೈ ಸಿದರು.
ಸಮಾ ರಂಭದ ಅಧ್ಯಕ್ಷತೆ ಯನ್ನು ಬಂಟ್ವಾಳ ಶಾಸಕ ರಾದ  ಬಿ ರಮಾ ನಾಥ ರೈ ಅವರು ವಹಿಸಿ, ಅಲ್ಪ ಸಂಖ್ಯಾ ತರ ಅಭಿ ವೃದ್ಧಿಗೆ ಅನುದಾನ ದೊರೆತಿ ರುವುದು ಉತ್ತಮ ಬೆಳವ ಣಿಗೆ ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎನ್ ಬಿ ಅಬೂಬಕ್ಕರ್ ಪ್ರಾಸ್ತಾವಿಕ ಭಾಷಣದಲ್ಲಿ ನಿಗಮ ಅಭಿವೃದ್ಧಿ ಹೊಂದಿದ ರೀತಿಯನ್ನು ವಿವರಿಸಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಿವಪ್ಪನಾಯ್ಕ್, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ  ಉಸ್ಮಾನ್ ಹಾಜಿ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜೋನ್ ಡಿ ಸೋಜಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೋಮಪ್ಪ ಸ್ವಾಗತಿಸಿದರು. ಈ ಕಾರ್ಯಕ್ರಮದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸ ಲಾಯಿತು.
         ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ನಾಗರೀಕರು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಯತ್ನಗಳಿಗೆ ಪೂರಕ ಸ್ಪಂದನೆ ನೀಡಬೇಕೆಂದರು. ನವೆಂಬರ್ ಒಂದರಿಂದ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದ್ದು, ತಾನು ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಮೌಖಿಕ ವಾಗಿ ಮಾಹಿತಿಯನ್ನು ನೀಡಿದ್ದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಲೋಟಗಳು ಮತ್ತು ಊಟದ ಟೇಬಲ್ ಗೆ ಹಾಸುವ ಶೀಟ್ ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು ಎಂದು ಹೇಳಿದರು.
ಪರಿಸರ ಸ್ನೇಹಿ ಜಿಲ್ಲಾಡಳಿತದ ಕ್ರಮಕ್ಕೆ ಜನರು ಸಹಕಾರ ನೀಡಬೇಕೆಂದು ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾ
ಡಿದರು.

ಅಪ ರಾಹ್ನ ಬೈಕಂ ಪಾಡಿ ಇಂಡ ಸ್ಟ್ರಿಯಲ್ ಏರಿ ಯಾದ ಅಡ್ಕ ಕಮ್ಯು ನಿಟಿ ಹಾಲ್ ನಲ್ಲಿ ಆಯೋ ಜಿಸ ಲಾದ ಮಂಗ ಳೂರು ಉತ್ತರ, ದಕ್ಷಿಣ ಮತ್ತು ಮೂಡ ಬಿದ್ರೆ ವಿಧಾನ ಸಭಾ ಕ್ಷೇತ್ರ ಗಳ ಫಲಾನು ಭವಿ ಗಳಿಗೆ ಸಾಲ ಸೌಲಭ್ಯ ಗಳ ಚೆಕ್ ವಿತ ರಣಾ ಸಮಾ ರಂಭವನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ಜನರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ನಿಗಮದ ಮೂಲಕ ಮಾಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸರ್ಕಾ ರದ ಜನ ಪರ ಯೋಜನೆ ಗಳಿಂದ ಬಡ ವರ್ಗದ ದುರ್ಬಲ ಜನರು ಸ್ವಾವ ಲಂಬಿ ಗಳಾ ಗುತ್ತಾರೆ. ಸಮಾ ಜದ ಮುಖ್ಯ ವಾಹಿನಿ ಯಲ್ಲೊಂದಾ ಗುತ್ತಾರೆ. ಈ ವರೆಗೆ ನಿಗಮ ಒಟ್ಟು 12 ಲಕ್ಷ ಕುಟುಂಬ ಗಳನ್ನು ಆರ್ಥಿಕ ವಾಗಿ ಚೇತರಿ ಸಿಕೊ ಳ್ಳಲು ಸಾಲ ಸೌಲಭ್ಯ ನೀಡಿದೆ ಎಂದರು.
ಇಂದಿನ ಅಪ ರಾಹ್ನದ ಸಮಾ ರಂಭ ದಲ್ಲಿ 661 ಫಲಾನು ಭವಿ ಗಳಿಗೆ 139 ಲಕ್ಷ ರೂ. ಸಾಲ ಸೌಲಭ್ಯ ವಿತರಿ ಸಲಾ ಯಿತು. ಅಧ್ಯಕ್ಷ ತೆಯನ್ನು ಮಂಗ ಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಮಾತನಾಡಿ, ದುರ್ಬಲ ವರ್ಗದವರನ್ನು ಸಬಲೀಕರಣಗೊಳಿಸುವುದಕ್ಕೆ ಸರ್ಕಾರದಿಂದ ಬಂದಿರುವ ನೆರವು ಗಮನಾರ್ಹ ಎಂದರಲ್ಲದೆ, ಈ ಸಾಲವನ್ನು ಹಿಂದಿರುಗಿಸುವಲ್ಲಿ ತನ್ನ ಕ್ಷೇತ್ರದ ಜನರು ತೋರಿರುವ ಮರುಪಾವತಿ ಮನೋಭಾವದಿಂದ ಭವಿಷ್ಯದಲ್ಲಿ ಇನ್ನೂ ಹೆಚ್ಚು ನೆರವು ಹರಿದುಬರಲಿದೆ ಎಂದರು.
ಉಪಸಭಾಪತಿ  ಎನ್ ಯೋಗೀಶ್ ಭಟ್ ಅವರು ಚೆಕ್ ವಿತರಿಸಿ, ಶುಭ ಹಾರೈಸಿದರು. ಮೂಡಬಿದ್ರೆ ವಿಧಾನಸಭಾ ಶಾಸಕರಾದ  ಕೆ ಅಭಯಚಂದ್ರ ಜೈನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಪರ ಯೋಜನೆಗಳು ಅರ್ಹರಿಗೆ ತಲುಪುತ್ತಿರುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎನ್ ಬಿ ಅಬೂಬಕ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮನಾಪ ಸದಸ್ಯ ಸುಧೀರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇಗೌಡ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ  ಜೋನ್ ಡಿ ಸೋಜಾ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.