Saturday, October 20, 2012

'ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಪೂರಕ ಯೋಜನೆ '

ಮಂಗಳೂರು, ಅಕ್ಟೋಬರ್.20 :- ಸ್ತ್ರೀ ಶಕ್ತಿ ಸಬಲೀಕರಣದ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಒದಗಿಸಲಾಗುವುದು ಎಂದು ಉಪಸಭಾಪತಿಗಳಾದ  ಎನ್. ಯೋಗೀಶ್ ಭಟ್ ಹೇಳಿದರು.
ಅವರಿಂದು ಕರ್ನಾಟಕ ರಾಜ್ಯ ಮಹಿಳಾ ಅಭಿ ವೃದ್ಧಿ ನಿಗಮ, ಬೆಂಗ ಳೂರು, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಸಹ ಯೋಗ ದಲ್ಲಿ ಇಂದು ಮಂಗಳಾ ದೇವಿ ದೇವಾ ಲಯದ ಬಳಿಯ ಕಾಂತಿ ಚರ್ಚ್ ಸಭಾಂ ಗಣ ದಲ್ಲಿ ಪ್ರದ ರ್ಶನ ಹಾಗೂ ಮಾರಾಟ ಮೇಳದ ಉದ್ಘಾ ಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಗರದ ಕೆ ಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಎದು ರಿರುವ ಜಾಗ ದಲ್ಲಿ ಸ್ತ್ರೀ ಶಕ್ತಿ ಮಾರಾಟ ಮಳಿಗೆ ನಿರ್ಮಾ ಣಕ್ಕೆ 34 ಲಕ್ಷ ರೂ.ಗಳ ಅನು ದಾನ ಬಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸ ಲಾಗು ವುದು ಎಂದರು. ಸ್ತ್ರೀ ಶಕ್ತಿ ಸಹ ಕಾರಿ ಬ್ಯಾಂಕ್ ಸ್ಥಾಪಿ ಸುವು ದರಿಂದ ಮಹಿಳೆಯರಿಗೆ ಅನುಕೂಲವಾಗಲಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ನಗರದ ಪ್ರಮುಖ ಸಮಸ್ಯೆಯಾಗಿರುವ ಕಸ ವಿಲೇವಾರಿಯನ್ನು ಸುಲಭಗೊಳಿಸಲು ಸ್ತ್ರೀ ಶಕ್ತಿ ಸಂಘಟನೆಗಳ ನೆರವಿನ ಅಗತ್ಯವಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮೇಯರ್ ಶ್ರೀಮತಿ ಗುಲ್ಜಾರ್ ಭಾನು ಅವರು ಮಹಿಳೆಯರ ಮಾರಾಟ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸದಸ್ಯರಾದ  ಜನಾರ್ಧನ ಗೌಡ, ಉಪಮೇಯರ್ ಶ್ರೀಮತಿ ಅಮಿತಕಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಚಂದ್ರಿಕಾ ಉಪಸ್ಥಿತರಿದ್ದರು.