Friday, October 26, 2012

ಪ್ಲಾಸ್ಟಿಕ್ ಬಳಕೆ ಅರಿವು ಮೂಡಿಸಲು ವಾಹನ ಜಾಗೃತಿ

ಮಂಗಳೂರು, ಅಕ್ಟೋಬರ್.26 :-ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ನಾಗರಿಕರಲ್ಲಿ  ಜಾಗೃತಿ ಮೂಡಿಸುವ ವಾಹನಕ್ಕೆ ಮೇಯರ್ ಗುಲ್ಜಾರ್ ಭಾನು ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದ ರ್ಭದಲ್ಲಿ ಮಾತ ನಾಡಿದ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು, ಜಿಲ್ಲೆ ಯಲ್ಲಿ ಪ್ಲಾಸ್ಟಿಕ್ ಹಾವಳಿ ಯನ್ನು ನಿಷೇ ಧಿಸಲು ಜಿಲ್ಲಾ ಡಳಿತ ಹಂತ ಹಂತ ವಾಗಿ ಕ್ರಮ ಕೈ ಗೊಳ್ಳು ತ್ತಿದ್ದು, ಪ್ರಥಮ ಹಂತ ದಲ್ಲಿ ನವೆಂಬರ್ ಒಂದ ರಿಂದ ಮಂಗ ಳೂರು ತಾಲೂಕಿ ನಾದ್ಯಂತ ಕೈ ಚೀಲ, ಪ್ಲಾಸ್ಟಿಕ್ ಕಪ್ಸ್ ಮತ್ತು ಡೈ ನಿಂಗ್ ಟೇಬಲ್ ಗೆ ಹಾಸುವ ಶೀಟ್ ಗಳನ್ನು ನಿಷೇಧಿ ಸಲಾಗಿದೆ ಎಂದರು.
ಈ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು, ಮಾಹಿತಿಯನ್ನು ನೀಡಲಾಗಿದ್ದು, ಕೆಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಮಾಹಿತಿ ವಿನಿಮಯವಾಗಿದೆ; ಬಳಕೆ ಮುಂದುವರಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸಿದ್ದು, ಜನಜಾಗೃತಿಯೊಂದೇ ಪರಿಹಾರ; ಈ ಕುರಿತು ಮಾಹಿತಿ ನೀಡಲು ಸಾಕಷ್ಟು ಯತ್ನಗಳನ್ನು ಮಾಡಲಾಗಿದೆ ಎಂದರು. ಪರಿಸರ ಸ್ನೇಹಿ ಕೈಚೀಲ ತಯಾ ರಿಕೆಗೆ ಸ್ವಸಹಾಯ ಸಂಘಗಳ ನೆರ ವನ್ನೂ ಪಡೆ ಯಲಾ ಗಿದೆ. ಮಂಗ ಳೂರು ತಾಲೂ ಕಿನಲ್ಲಿ ಮುಖ್ಯ ವಾಗಿ ಪ್ಲಾಸ್ಟಿಕ್ ನಿಷೇ ಧಿಸಲು ಜನರ ಸಹ ಕಾರ ಅಗತ್ಯ ಎಂದು ಜಿಲ್ಲಾ ಧಿಕಾ ರಿಗಳು ಹೇಳಿ ದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಉಪಸ್ಥಿತರಿದ್ದರು.