Monday, October 29, 2012

ಮಂಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆ

ಮಂಗಳೂರು, ಅಕ್ಟೋಬರ್. 29 : ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ವಾಸವಾಗಿರುವ ಗುಡ್ಡಗಾಡು ಜನರ ಅಭಿವೃದ್ಧಿಗೆ 500 ಕೋಟಿ ರೂ.ಗಳ ಪ್ಯಾಕೇಜ್ ನ್ನು ವಿಧಾನಮಂಡಲದ ಅರ್ಜಿ ಸಮಿತಿ ಸ್ವಯಂ  ಪ್ರೇರಿತ ಆಸಕ್ತಿಯಿಂದ ರೂಪಿಸಿದೆ ಎಂದು ವಿಧಾನಸಭಾ ಉಪಾಧ್ಯಕ್ಷರಾದ  ಎನ್ ಯೋಗೀಶ್ ಭಟ್ ಅವರು ಹೇಳಿದರು.
ಅವ ರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಮಹರ್ಷಿ ವಾಲ್ಮೀಕಿ ಜನ್ಮ ದಿನಾ ಚರಣೆ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಈ ಮೂರು ಜಿಲ್ಲೆ ಗಳಲ್ಲಿ ಗುಡ್ಡ ಗಾಡು ಪ್ರದೇಶದಲ್ಲಿ ವಾಸ ವಾಗಿರುವ ಅತ್ಯಂತ ಹಿಂದು ಳಿದಿರುವ ಪ್ರದೇಶದ ಸುಮಾರು 1500  ಕುಟುಂಬಗಳನ್ನು ಗುರುತಿಸಲಾಗಿದ್ದು, ಇವರನ್ನು ಮುಖ್ಯವಾಹಿನಿಗೆ ಕರೆತರಲು ಪೂರಕ ಪ್ಯಾಕೇಜ್ ಇದಾಗಿರುತ್ತದೆ ಎಂದರು. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ನಡೆಸಲಾಗಿದೆ ಎಂದರು.
ಈ ಪ್ಯಾಕೇಜ್ನ್ನು ಹಿಂದುಳಿದ ಜನರ ಆರೋಗ್ಯ, ಶಿಕ್ಷಣ, ವೃತ್ತಿಜೀವನ ರೂಪಿಸಲು ಹಾಗೂ ಸಾಮಾಜಿಕ ಪಿಡುಗುಗಳಿಂದ ದೂರ ಉಳಿಯುವ ಉದ್ದೇಶವನ್ನಿರಿಸಿ ರೂಪಿಸಲಾಗಿದೆ ಎಂದರು.
ಆದಿ ಕವಿ ವಾಲ್ಮೀಕಿ ಸಾಂಸ್ಕೃತಿಕ ಭಾರತದ ಕಾರಣ ಪುರುಷ.ಅವರ ಜೀವನ ಚರಿತ್ರೆ, ಕಾವ್ಯ ಎಲ್ಲವೂ ನಮಗಿಂದು ಪ್ರಸಕ್ತ ಹಾಗೂ ಮಾದರಿ ಎಂದರು. ಸದಾ ಕಾಲಕ್ಕೆ ಪ್ರಸ್ತುತವಾಗಿರುವ ರಾಮಾಯಣವನ್ನು ಭಾರತಕ್ಕೆ ನೀಡಿದವರು ವಾಲ್ಮೀಕಿ. ರಾಮಾಯಣ, ಮಹಾಭಾರತದ ಜೀವನ ಸಂದೇಶಗಳು, ಚಿಂತನೆಗೆ ಹಚ್ಚುತ್ತವೆ ಎಂದರು. ಇಂತಹ ದಿನಾಚರಣೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದೂ ಅವರು ಹೇಳಿದರು.
ಸಮಾ ರಂಭ ವನ್ನು ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷ ರಾದ  ರಿತೇಶ್ ಶೆಟ್ಟಿ ಉದ್ಘಾ ಟಿಸಿ, ಸಮಾನ ಸಮಾಜ ರೂಪು ಗೊಳ್ಳಲಿ ಎಂದು ಹಾರೈ ಸಿದರು. ಮಂಗ ಳೂರು ವಿಶ್ವ ವಿದ್ಯಾನಿ ಲಯದ ಉಪ ಗ್ರಂಥ ಪಾಲಕ ರಾದ ಡಾ ಪಿ ವೈ ಮಲ್ಲಯ್ಯ ಅವರು ಮುಖ್ಯ ಭಾಷಣಕಾರರಾಗಿದ್ದರು. ಜಿಲ್ಲಾ ಪಂಚಾಯತ್ ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ  ಜನಾರ್ಧನ ಗೌಡ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚನ್ನಪ್ಪಗೌಡ, ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಉಪಕಾರ್ಯದರ್ಶಿ ಡಿ ಎಸ್ ಶಿವರಾಮೇಗೌಡ ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಸಬೀರ್ ಅಹಮ್ಮದ್ ಮುಲ್ಲಾ ಅವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಾಲ್ಮೀಕಿ ಅಸೋಸಿಯೇಷನ್ ನ  ಆಲೇಶಪ್ಪ ವಂದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ತಂಡ ಸಮಾರಂಭದಲ್ಲಿ ಪಾಲ್ಗೊಂಡಿತ್ತು.