Thursday, June 28, 2012

ಪದ್ಮಯ್ಯ ನಾಯಕ್ ರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು,ಜೂನ್.28:ಜಿಲ್ಲೆಯಲ್ಲಿ ಕೃಷಿಗೆ ಪೂರಕ ವಾತಾವರಣವಿದ್ದರೂ, ಕೃಷಿ ಕ್ಷೇತ್ರದಿಂದ ಮಾನವ ಸಂಪನ್ಮೂಲ ವಿಮುಖವಾಗುತ್ತಿದೆ; ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿದ್ದರಿಂದ ಮತ್ತೆ ಕೃಷಿಕರನ್ನು ಕೃಷಿಯತ್ತ ಸೆಳೆಯುವುದು ಸಾಧ್ಯ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ಹೇಳಿದರು.
ಬುಧವಾರ ಸಂಜೆ ವಾರ್ತಾ ಇಲಾಖೆಯಲ್ಲಿ ಕೃಷಿ ಇಲಾಖೆಯ ಸಹೋದ್ಯೋಗಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇಲಾಖೆಯು ಕೃಷಿಪರ ಕೆಲಸಗಳಿಂದ ಜಿಲ್ಲೆಯಲ್ಲಿ ಗುರುತಿಸಲ್ಪಡಬೇಕು. ಎಲ್ಲ ಸಹದ್ಯೋಗಿಗಳ ಸಹಕಾರದಿಂದ ಇಲಾಖೆ ಕೃಷಿಕರಿಂದ ಗುರುತಿಲ್ಪಡಬೇಕು. ಮುಂದೆ ಬರುವ ಅಧಿಕಾರಿಗಳಿಗೂ ಎಲ್ಲ ಸಹಕಾರ ನೀಡಬೇಕು ಎಂದು ಕೊಪ್ಪಳಕ್ಕೆ ವರ್ಗಾವಣೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪದನ್ನೋತಿ ಹೊಂದಿ ಚಿಂಚೋಳಿಗೆ ವರ್ಗಾವಣೆಯಾದ ಗುರುಶಾಂತ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕೃಷಿ ಇಲಾಖೆಯ ಎಲ್ಲ ಸಹದ್ಯೋಗಿಗಳು ಜಿಲ್ಲೆಯಿಂದ ಆಗಮಿಸಿದ್ದರು.