Tuesday, June 26, 2012

ಆರೋಗ್ಯ ದಿನಾಚರಣೆ ಪ್ರಶಸ್ತಿ ಪಡೆದವರು

ಮಂಗಳೂರು,ಜೂನ್. 26 :ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭದಲ್ಲಿ 15 ಮಂದಿ ಸರಕಾರಿ ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.2011-12 ನೇ ಸಾಲಿನ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಪ್ರಶಸ್ತಿ ಪಡೆದವರ ವಿವರ ಇಂತಿದೆ.
ಉತ್ತಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತ,ಉತ್ತಮ ಪ್ರಸೂತಿ ತಜ್ಞೆ -ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಡಾ.ರಶ್ಮಿ ಎಂ.ಎನ್.
ಉತ್ತಮ ಮಕ್ಕಳ ತಜ್ಞರು-ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಕೃಷ್ಣ, ಉತ್ತಮ ವೈದ್ಯಾಧಿಕಾರಿ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನವೀನ್ ಕುಮಾರ್. ವಿ. ಉತ್ತಮ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ-ಅತ್ತೂರು ಆರೋಗ್ಯ ಕೇಂದ್ರದ ಶ್ರೀಮತಿ ಜೆಸಿಂತ ಲೋಬೋ, ಉತ್ತಮ ಹಿರಿಯ ಪುರುಷ ಆರೋಗ್ಯ ಸಹಾಯಕ ,ಕುಡುಪು ಆರೋಗ್ಯ ಕೇಂದ್ರದ ಸೆಬೆಸ್ಟಿಯನ್ ರೇಗೋ, ಉತ್ತಮ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ -ಅಂಬ್ಲಮೊಗರು ಆರೋಗ್ಯ ಕೇಂದ್ರದ ಶ್ರೀಮತಿ ಕುಸುಮ, ಉತ್ತಮ ಕಿರಿಯ ಪುರುಷ ಆರೋಗ್ಯ ಸಹಾಯಕ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ರುದ್ರಪ್ಪ ಬಿ.ತಿಮ್ಮಾಪುರ್, ಉತ್ತಮ ಶುಶ್ರೂಷಕಿ -ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಶ್ರೀಮತಿ ಕುಮುದ,ಉತ್ತಮ ಶ್ರುಶ್ರೂಷಕಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ರೋಸಮ್ಮ.ಪಿ.ಉತ್ತಮ ಔಷಧಿ ವಿತರಕ ಅತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಿಷ್ಣುರಾಜ್,ಉತ್ತಮ ಲ್ಯಾಬ್ ಟೆಕ್ನಿಷಿಯನ್ ಅಡ್ಯಾರ್ ಆರೋಗ್ಯ ಕೇಂದ್ರದ ಅಹಮ್ಮದ್ ಶರೀಫ್, ಉತ್ತಮ ನೇತ್ರ ಸಹಾಯಕ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಮಹೇಶ್, ಉತ್ತಮ ಲಿಪಿಕ ನೌಕರ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ನಾರಾಯಣಿ ,ಉತ್ತಮ ವಾಹನ ಚಾಲಕ ಮಂಗಳೂರು ತಾಲೂಕು ಆರೋಗ್ಯ ಕೇಂದ್ರದ ಸತೀಶ್, ಉತ್ತಮ ಗ್ರೂಪ್ ಡಿ ನೌಕರ ಬೊಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರೇಂದ್ರ ಪೂಜಾರಿ ಇವರುಗಳಿಗೆ ಪ್ರಶಸ್ತಿ ನೀಡಲಾಯಿತು.
ಉತ್ತಮ ಆರೋಗ್ಯ ಕೇಂದ್ರವೆಂದು ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಯ್ಕೆ ಮಾಡಿ ಡಾ.ನವೀನ್ ಕುಮಾರ್ ,ಉತ್ತಮ ಉಪ ಆರೋಗ್ಯ ಕೇಂದ್ರವೆಂದು ಮೂಳೂರು ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿ ಡಾ ಸುನೀತ ಗಾಂವ್ಕರ್ ಪ್ರಶಸ್ತಿ ಸ್ವೀಕರಿಸಿದರು. ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಶ್ರೀಮತಿ ಲ್ಯಾನ್ಸಿಲೋಬೋ ಇದೀಗ ಕುಷ್ಠ ನಿವಾರಣಾಧಿಕಾರಿ ಮತ್ತು ಅಂಧತ್ವ ನಿವಾರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಪ್ರಶಸ್ತಿ ನೀಡಲಾಯಿತು.