ಅವರು ಇಂದು ದ.ಕ.ಜಿಲ್ಲಾಡಳಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಹಾಗೂ ಮಾತಾ ಅಮೃತಾನಂದ ಮಯಿ ಮಠ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಾನವನ ದುರಾಸೆ ಫಲವಾಗಿ ಪ್ರಕೃತಿ ಬರಡಾಗುತ್ತಿದೆ,ಜೀವ ರಾಶಿಗಳಿಗೆ ನೆಲೆ ಇಲ್ಲದಂತಾಗುತ್ತಿದೆ. ಆದ್ದರಿಂದ ಪ್ರಕೃತಿಯನ್ನು ನಾವು ಮಾತೃ ಸದೃಶವಾಗಿ ಕಾಣುವ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಬೇಕು ,ನಮ್ಮಶಾಲಾ ವಿದ್ಯಾಥರ್ಿಗಳಿಗೆ ಪರಿಸರದ ಸಂರಕ್ಷಣೆ ಕುರಿತು ಮನವರಿಕೆ ಮಾಡಿದಲ್ಲಿ ಅವರು ನಮ್ಮ ಪರಿಸರವನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡುವ ಕಾರ್ಯದಲ್ಲಿ ಮುಂದಾಗಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿವುಂಟು ಮಾಡಲಾಗುತ್ತಿದೆ.ಪರಿಸರ ಕಲುಷಿತಕ್ಕೆ ಕಲಿಯದವರಿಗಿಂತ ಕಲಿತವರೇ ಹೆಚ್ಚು ಕಾರಣರಾಗುತ್ತಿದ್ದಾರೆ.
ಹಿರಿಯ ಪರಿಸರ ಅಧಿಕಾರಿ ಸಿ.ಡಿ.ಕುಮಾರ್. ಮಂಗಳೂರು ಪೆಟ್ರೋ ಕೆಮಿಕಲ್ಚ್ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಎ.ಜಿ.ಪೈ ,ಅಮೃತಾನಂದ ಮಯೀ ಮಠದ ಬ್ರಹ್ಮಚಾರಿಣಿ ಮಂಗಳಾ ಚೈತನ್ಯ ಮುಂತಾದವರು ಹಾಜರಿದ್ದರು.
ಜೀವರಾಜ ಸೊರಕೆ ಸ್ವಾಗತಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ನಿಖಿಲ್ ನವ್ಯ ಮತ್ತು ಹರ್ಷ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅನುಷಾ.ಎಸ್..ರಮ್ಯಾ.ಎಸ್. ವಿಶಾಲ್ ಇವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.