ಮಂಗಳೂರು,ಜೂನ್.17:ಮುಖ್ಯಮಂತ್ರಿಗಳು ಇತ್ತೀಚೆಗೆ ಶಿರಾಡಿ ಘಾಟ್ ಗೆ ತೆರಳಿ ರಸ್ತೆ ಪರಿಶೀಲಿಸಿರುವ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಸಿದ್ಧಗೊಂಡಿದೆ. ಪಿಪಿಪಿ ಆಧಾರದಲ್ಲಿ ಸುರಂಗ ರಸ್ತೆ ನಿರ್ಮಿಸಲು ಚಿಂತನೆ ನಡೆದಿದೆ ಎಂದು ವಿಧಾನಸಭೆಯ ಉಪಸಭಾಪತಿ ಎನ್. ಯೋಗೀಶ್ ಭಟ್ ತಿಳಿಸಿದ್ದಾರೆ.

ಸಿದ್ಧ ಪಡಿಸಲಾದ ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಯೋಜನೆಯ ವೆಚ್ಚ ಭರಿಸಲಿವೆ. ಘಾಟ್ ರಸ್ತೆಯ ಸುರಂಗ ಮಾರ್ಗವನ್ನು ನಿರ್ಮಿಸಲು ಜಪಾನ್ ಕಂಪೆನಿಯೊಂದು ಆಸಕ್ತಿ ವಹಿಸಿದ್ದು, ಮಾತ್ರವಲ್ಲದೆ ಇತರ ಕಂಪೆನಿಗಳು ಮುಂದೆ ಬಂದಿವೆ ಎಂದು ಭಟ್ ನುಡಿದರು.