Friday, June 1, 2012

ಒಕ್ಕೂಟ ಸ್ವಾವಲಂಬನೆ ಹೊಂದಲು ಹಾಲು ಉತ್ಪಾದನೆಯ ಹೆಚ್ಚಳ ಆವಶ್ಯ

ಮಂಗಳೂರು. ಜೂನ್,01:ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಪ್ರಸ್ತುತ ದಿನ ಗಳಲ್ಲಿ ಹಾಲು ಉತ್ಪಾದ ನೆಯಲ್ಲಿ ಸ್ವಲ್ಪ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಒಕ್ಕೂಟವು ಸ್ವಾವಲಂಬಿಯಾಗಲು ಇನ್ನೂ ಹೆಚ್ಚಿನ ಉತ್ಪಾದನೆಯಾಗಬೇಕೆಂದುಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ಇಂದು ತಿಳಿಸಿದರು.



ಅವರು ಇಂದು ಮಂಗಳೂರು ಡೇರಿ ಆವರಣದಲ್ಲಿ ಅಪರಾಹ್ನ ನಡೆದ ವಿಶ್ವ ಹಾಲು ದಿನಾ ಚರಣೆ ಸಮಾ ರಂಭದಲ್ಲಿ ಮಾತ ನಾಡು ತ್ತಿದ್ದರು. ರೈತರಿಗೆ ನೀಡು ತ್ತಿರುವ ಪ್ರೋತ್ಸಾಹ ಧನ ವನ್ನು ಇನ್ನೂ ಒಂದು ತಿಂಗಳ ಕಾಲ ನೀಡುವು ದಾಗಿ ಅವರು ತಿಳಿಸಿ ದರು. ಮೈಸೂರು ಪಾಕ್/ಪೇಡಾ ಮಾರಾ ಟದ ಬಹುಮಾನ ಯೋಜನೆ ಯಲ್ಲಿ ಚಿನ್ನ ಬೆಳ್ಳಿ ನಾಣ್ಯಗಳ ವಿಜೇ ತರಿಗೆ ಬಹು ಮಾನ ವಿತರಿಸ ಲಾಯಿತು ಹಾಗೂ ನಂದಿನಿ ಉತ್ಪನ್ನ ಗಳ ಬಗೆಗಿನ ಪುಸ್ತಕ ಬಿಡು ಗಡೆ ಮತ್ತು 2010-11 ನೇ ಸಾಲಿನ ಉತ್ತಮ ಡೀಲರು ಗಳಿಗೆ ಬಹು ಮಾನ ವಿತರಣೆ ಯನ್ನು ಈ ಸಂದ ರ್ಭದಲ್ಲಿ ನೆರ ವೇರಿ ಸಲಾಯಿತು.
ವಿಶ್ವ ದಿನಾ ಚರಣೆ ಸಮಾ ರಂಭ ದಲ್ಲಿ ಹಾಲು ಒಕ್ಕೂಟದ ನಿರ್ದೇ ಶಕರು ಗಳಾದ ಸವಣೂರು ಸೀತಾರಾಮ ರೈ ಮತ್ತು ಮುಕುಂದ ನಾಯಕ್ ಮುಂತಾ ದವರು ಉಪ ಸ್ಥಿತ ರಿದ್ದರು.ವಿಶ್ವ ಹಾಲು ದಿನಾ ಚರಣೆ ಯಂಗವಾಗಿ ಇಂದು ಬೆಳಿಗ್ಗೆ ಜೆಪ್ಪು ವಿನಲ್ಲಿರುವ ಭಗಿನಿ ಸಮಾ ಜದಲ್ಲಿ 50 ಅನಾಥ ಮಕ್ಕಳಿಗೆ ನಂದಿನಿ ಸುವಾಸಿತ ಹಾಲು ಹಾಗೂ ನಂದಿನಿ ಉತ್ಪನ್ನ ಮತ್ತಿತರ ವಸ್ತುಗಳನ್ನು ವಿತರಿ ಸಲಾ ಯಿತು. ಬಳಿಕ ನಂತೂ ರಿನಲ್ಲಿ ರುವ ಲಿಟಲ್ ಸಿಸ್ಟರ್ಸ್ ಆಫ್ ಪೂವರ್ ಸಂಸ್ಥೆ ಯಲ್ಲಿ ರುವ 110 ಅನಾಥ ವೃದ್ಧ್ಧರಿಗೆ ತಲಾ ಅರ್ಧ ಲೀಟರ್ ಹಾಲು ವಿತರಿ ಸಲಾ ಯಿತು. ಬಳಿಕ ವಾಮಂಜೂರಿನ ಮಂಗಳ ಜ್ಯೋತಿ ಸಮಗ್ರ ಶಾಲೆಯ 550 ಮಕ್ಕಳಿಗೆ ಸುವಾಸಿತ ಟೆಟ್ರಾ ಪ್ಯಾಕ್ ಹಾಲು ಮತ್ತು ಉತ್ಪನ್ನ ಗಳನ್ನು ವಿತರಿ ಸಲಾ ಯಿತೆಂದು ಹಾಲು ಒಕ್ಕೂಟದ ಅಧ್ಯಕ್ಷರು ತಿಳಿಸಿರುತ್ತಾರೆ.