Thursday, June 14, 2012

ದ.ಕ.ಸಂಸದರ ನಿಧಿಯಿಂದ ರೂ.17.37 ಲಕ್ಷ ಬಿಡುಗಡೆ

ಮಂಗಳೂರು,ಜೂನ್.14:ಸಂಸತ್ ಸದಸ್ಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ.ಜಿಲ್ಲೆಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರವರ 2010-11 ನೇ ಸಾಲಿನ 2 ಹಾಗೂ 2011-12 ನೇ ಸಾಲಿನ 8 ಕಾಮಗಾರಿಗಳಿಗೆ ಮಂಜೂರಾಗಿದ್ದ ಒಟ್ಟು 28.00 ಲಕ್ಷ ರೂ.ಗಳಲ್ಲಿ ಇದೀಗ ರೂ. 17.37 ಲಕ್ಷಗಳನ್ನು ಬಿಡುಗಡೆ ಮಾಡಿ ಸಂಬಂಧಿಸಿದವರಿಗೆ ಚೆಕ್ ಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
2010-11 ನೇ ಸಾಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನೀರ ಚಿಲುಮೆ ಅರ್ಬಿ ಪರಿಶಿಷ್ಟ ಪಂಗಡದ ಕಾಲೊನಿ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ ರೂ.2.00 ಲಕ್ಷದಲ್ಲಿ ರೂ.1.50 ಲಕ್ಷ ಬಿಡುಗಡೆ ಮಾಡಿ ಚೆಕ್ ನ್ನು ಸಂಬಂಧಿಸಿದವರಿಗೆ ವಿತರಿಸಲಾಗಿದೆ. ಇದೇ ತಾಲೂಕಿನ ಮೇಲಂತಬೆಟ್ಟುವಿನ ಮುಂಡೂರು-ಮೇಲಂತಬೆಟ್ಟು ರಸ್ತೆ ಅಭಿವೃದ್ಧಿಗಾಗಿ ರೂ.2.00 ಲಕ್ಷ ಮಂಜೂರಾಗಿದ್ದು ರೂ.1.50 ಲಕ್ಷ ಬಿಡುಗಡೆಯಾಗಿದೆ.
2011-12 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಎವಲ್ತ್ತೋಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 3.00 ಲಕ್ಷ ಮಂಜೂರಾಗಿದ್ದು ರೂ.2.25 ಲಕ್ಷ ಬಿಡುಗಡೆಯಾಗಿದೆ.ಮುಂಡಾಜೆ ಗ್ರಾಮದ ಚಾಮುಂಡಿ ನಗರದ ಅಂಗನವಾಡಿ ಕಟ್ಟಡ ರಚನೆಗೆ ರೂ.2.00 ಲಕ್ಷ ಮಂಜೂರಾಗಿ ಅದರಲ್ಲಿ ಇದೀಗ ರೂ.1.50 ಲಕ್ಷ ಬಿಡುಗಡೆಯಾಗಿದೆ. ಕಳಿಯ ಗ್ರಾಮದ ನೆಲ್ಲಿಕಟ್ಟೆ-ಉಬರಡ್ಕ ರಸ್ತೆ ಅಭಿವೃದ್ಧಿ ಮತ್ತು ಮೋರಿ ನಿರ್ಮಾಣಕ್ಕಾಗಿ ರೂ.1.00 ಲಕ್ಷ ಮಂಜೂರಾಗಿತ್ತು. ಇದರಲ್ಲಿ ರೂ.75 ಸಾವಿರಗಳನ್ನು ಬಿಡುಗಡೆ ಮಾಡಿದೆ. ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಡಿರುದ್ಯಾವರ ಕೊಡಿಯಾಲ್ ಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ರಚನೆಗೆ ರೂ.0.75 ಸಾವಿರ ಬಿಡುಗಡೆ ,ಉಜಿರೆ ಗ್ರಾಮದ ನೀರಚಿಲುಮೆ ಅರ್ಬಿ ರಸ್ತೆ ಅಭಿವೃದ್ಧಿ ಮುಂದುವರಿದ ಕಾಮಗಾರಿಗೆ ರೂ.0.75 ಸಾವಿರ ಬಿಡುಗಡೆಯಾಗಿದೆ. ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜಿನ ಬಿಸಿನೆಸ್ ಮ್ಯಾನೇಜ್ಮೆಂಟ್ ಕಟ್ಟಡದ ಮೊದಲ ಮಹಡಿ ಮತ್ತು ಮಹಿಳಾ ಕೊಠಡಿ ನಿರ್ಮಾಣದ ಕಾಮಗಾರಿಗೆ ಮಂಜೂರಾಗಿದ್ದ ರೂ.10 ಲಕ್ಷದಲ್ಲಿ ರೂ.5.00 ಲಕ್ಷ ಬಿಡುಗಡೆಯಾಗಿದೆ. ಬಂಗ್ರಕೂಳೂರು ವಾರ್ಡ್ ಬಳಿ ಕಂಪೌಂಡು ರೇಖಾ ಶೆಟ್ಟಿಯವರ ಮನೆ ಬಳಿ ಚರಂಡಿ ರಚನೆಗೆ ರೂ.1.12 ಲಕ್ಷ ಬಿಡುಗಡೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿಯಿಂದ ಕರ್ಮಾನು ಮಂಜಿನಗಡ್ಡೆ ವರೆಗಿನ ರಸ್ತೆ ಕಾಂಕ್ರೀಟೀಕರಣಕ್ಕೆ ಮಂಜೂರಾಗಿದ್ದ ರೂ.5.00 ಲಕ್ಷಗಳಲ್ಲಿ ರೂ.3.75 ಲಕ್ಷ ಬಿಡುಗಡೆ ಮಾಡಲಾಗಿದೆ.