ಈ ಸಂಬಂಧ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಕ್ಕೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಹಾಗೂ ಕಾರ್ಮಿಕರು ಕಾರಣವಾದರೆ ತಕ್ಷಣವೇ ಅಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.

ಕಟ್ಟಡ ನಿಮರ್ಾಣ ಮಾಡುವವರು ತಮ್ಮ ಕಟ್ಟಡಗಳ ಸುತ್ತಮುತ್ತ ನಿಲ್ಲಿಸಿದ ನೀರಿಗೆ ಲಾರ್ವಾ ನಾಶಕ ಔಷಧಿ ಸಿಂಪಡಣೆ, ಕಟ್ಟಡ ಕಾಮಗಾರಿಯಲ್ಲಿ ನಿರತ ಕಾರ್ಮಿಕರಿಗೆ ಸುರಕ್ಷಿತ ವಾಸಸ್ಥಳ, ಸೊಳ್ಳೆ ಪರದೆ ಒದಗಿಸುವ ಹೊಣೆ ಹೊರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ವೈದ್ಯರು ಅಲಭ್ಯವಿರುವ ಕಾರಣ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ದಕ್ಷ ವೈದ್ಯರೊಬ್ಬರನ್ನು ನಿಯೋಜಿಸಿ ಹೆಚ್ಚುವರಿ ಪ್ರಭಾರ ನೀಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಡಿ ಎಚ್ ಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಡಿ ಎಚ್ ಒ ಒ ಆರ್ ಶ್ರೀರಂಗಪ್ಪ, ಡಿ ಎಂ ಒ ಡಾ ಅರುಣ್. ಎಂಟಮೋಲಾಜಿಸ್ಟ್(ಕೀಟ ಶಾಸ್ತ್ರ ತಜ್ಞೆ) ಮುಕ್ತಾ, ಡಾ ಸುದರ್ಶನ್, ಹಿರಿಯ ಆರೋಗ್ಯ ನಿರೀಕ್ಷಕ ಜಯರಾಂ ಸೇರಿದಂತೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.