Thursday, April 14, 2011

ಡಾ.ಅಂಬೇಡ್ಕರ್ ಹೆಸರು ಶಾಶ್ವತವಾಗಿ ಉಳಿಯಬೇಕು: ಸಚಿವ ಪಾಲೇಮಾರ್

ಮಂಗಳೂರು,ಏಪ್ರಿಲ್.14:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಶಾಶ್ವತವಾಗಿ ಜನರ ಮನದಲ್ಲಿ ಉಳಿಯಬೇಕು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ರಾಜ್ಯ ಬಂದರು,ಮೀನುಗಾರಿಕೆ,ಒಳನಾಡು ಜಲಸಾರಿಗೆ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಹೇಳಿದ್ದಾರೆ.

ಇಂದು ಮಂಗ ಳೂರಿನ ಪುರ ಭವನ ದಲ್ಲಿ ಜಿಲ್ಲಾ ಡಳಿತ, ಜಿಲ್ಲಾ ಪಂಚಾ ಯತ್, ಮಂಗ ಳೂರು ಮಹಾ ನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಯ ಸಂಯು ಕ್ತ ಆಶ್ರಯ ದಲ್ಲಿ ನಡೆದ ಸಂವಿ ಧಾನ ಶಿಲ್ಪಿ,ಭಾರತ ರತ್ನ ಡಾ.ಬಿ.ಆರ್.ಅಂಬೇ ಡ್ಕರ್ ಅವರ 120 ನೇ ಜನ್ಮ ದಿನಾ ಚರಣೆ ಕಾರ್ಯ ಕ್ರಮ ಉದ್ಘಾ ಟಿಸಿ ಅವರು ಮಾತ ನಾಡಿದರು.ಡಾ.ಅಂಬೇ ಡ್ಕರ್ ದೇಶದ ಮಹಾನ್ ಶಿಲ್ಪಿ. ದೇಶದ ಮುಂದಿನ ಪೀಳಿಗೆ ಯೂ ಅವರ ಆದರ್ಶ ಗಳನ್ನು ಮೈ ಗೂಡಿಸಿ ಕೊಳ್ಳು ವಂತಾ ಗಬೇಕು, ಈ ನಿಟ್ಟಿ ನಲ್ಲಿ ಇಂದಿನ ಪೀಳಿ ಗೆಗೆ ಅಂಬೇ ಡ್ಕರ್ ಅವರ ಕಾರ್ಯ ಸಾಧನೆ ಗಳ ಬಗ್ಗೆ ಅರಿವು ಮೂಡಿ ಸುವ ಕೆಲಸ ನಡೆಯ ಬೇಕಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಮೂಡದ ಅಧ್ಯಕ್ಷ ಡಾ. ಮಾಧವ ಭಂಡಾರಿ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಪ್ರತಿಬಿಂಬಗಳಾಗಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಪರಿವರ್ತನೆಯ ಕಡೆ ಹೆಜ್ಜೆ ಇಡಬೇಕೆಂದರು.
ಪ್ರಮುಖ ಭಾಷಣಕಾರಾದ ಮಂಗಳೂರು ವಿವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಕುಮಾರಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ಶೋಷಿತ ವರ್ಗದ ಸಮಸ್ಯೆಯ ವಿರುದ್ಧ ಮಾತ್ರ ಹೋರಾಟ ಮಾಡಿಲ್ಲ,ಮಹಿಳೆಯರು, ಹಿಂದುಳಿದ ವರ್ಗ, ನಿರ್ಗತಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವಲ್ಲಿ ಹೋರಾಟ ನಡೆಸಿದವರು ಎಂದರು.ಶಾಸಕ ಯು.ಟಿ.ಖಾದರ್ ಮಾತನಾಡಿ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ದೇಶದ ಎಲ್ಲಾ ಜನರಿಗೆ ಸಂವಿಧಾನ ಪವಿತ್ರ ಗ್ರಂಥವಿದ್ದ ಹಾಗೆ ಎಂದು ನುಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಮಾತನಾಡಿ ಭವ್ಯ ಮತ್ತು ಸಧೃಡ ಭಭಾರತದ ಕನಸು ಕಂಡವರು ಡಾ.ಅಂಬೇಡ್ಕರ್, ಇದಾಗ ಬೇಕಿದ್ದರೆ ಸರಕಾರದ ಸವಲತ್ತುಗಳು ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ದೊರಕುವಂತಾಗಬೇಕು ಎಂದು ನುಡಿದರು.
ಪಾಲಿಕೆ ಮೇಯರ್ ಪ್ರವೀಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಮಾ ರಂಭ ದಲ್ಲಿ ಐದು ಮಂದಿ ಸಾಧಕ ರನ್ನು ಗೌರವಿ ಸಲಾ ಯಿತು. ಇದೇ ಸಂದರ್ಭ ದಲ್ಲಿ 11 ಮಂದಿಗೆ ಟೆಂಪೋ ಮತ್ತು 6 ಮಂದಿಗೆ ಅಟೋ ರಿಕ್ಷಾ ವಿತ ರಣೆ, 1.5 ಲಕ್ಷ ಸಹಾ ಯ ಧನ ಹಾಗೂ 10 ಮಂದಿಗೆ ದೋಣಿ ಘಟಕ ದ 3.5 ಲಕ್ಷ ಸಹಾಯ ಧನ ವಿತ ರಿಸಲಾ ಯಿತು.ಅಲ್ಲದೆ ಕೃಷಿ, ಕಲಾ ಕ್ಷೇತ್ರ ದಲ್ಲಿ ಸಾಧನೆ ಗೈದ ಫಲಾ ನುಭವಿ ಗಳಿಗೆ ವಿವಿಧ ಸವಲತ್ತು ಗಳನ್ನು ವಿತರಿಸಲಾಯಿತು.
ದ.ಕ.ಜಿಲ್ಲಾಧಿಕಾರಿ ಸುಬೋದ್ ಯಾದವ್, ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಉಪಮೇಯರ್ ಗೀತಾ ನಾಯಕ್, ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್ಪಿ ಲಾಬೂರಾಮ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಮನಪಾ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್, ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಅಕಾರಿ ಅರುಣ್ ಪುರ್ಟಡೋ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.