Friday, April 29, 2011

ಎಂಡೋಸಲ್ಫಾನ್ ಶಾಶ್ವತ ನಿಷೇಧಕ್ಕೆ ಮುಖ್ಯಮಂತ್ರಿ ಒತ್ತಾಯ

ಮಂಗಳೂರು, ಏಪ್ರಿಲ್.29:ಜನರ ಆಶಯಕ್ಕೆ ಪೂರಕವಾಗಿ ಎಂಡೋಸಲ್ಫಾನ್ ನಿಷೇಧಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದರು.


ಇಂದು ಮಂಗ ಳೂರಿನ ಕದ್ರಿ ಹಿಲ್ಸ್ ನಲ್ಲಿ ಹೊಸ ಸರ್ಕಿಟ್ ಹೌಸ್ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಮೀನು ಗಾರರ ರಾಷ್ಟ್ರೀಯ ಸಮಾ ವೇಶ ದಲ್ಲಿ ಪಾಲ್ಗೊ ಳ್ಳಲು ನಗರಕ್ಕೆ ಆಗ ಮಿಸಿದ್ದ ಅವರು ಮೇರಿ ಹಿಲ್ ಹೆಲಿ ಪ್ಯಾಡಿನಲ್ಲಿ ಪತ್ರಕ ರ್ತರ ಪ್ರಶ್ನೆಗೆ ಉತ್ತ ರಿಸಿದ ಎಂಡೋ ಸಲ್ಫಾನ್ ನಿಷೇಧದ ಬಗ್ಗೆ ಹೋರಾಟ ನಡೆಸು ತ್ತಿರುವ ಕೇರಳ ಮುಖ್ಯ ಮಂತ್ರಿ ಗಳಿಗೆ ತಾವು ಸಂಪೂರ್ಣ ಬೆಂಬಲ ನೀಡು ವುದಾಗಿ ಹೇಳಿ ದರು.ಕೆಂದ್ರ ಸರ್ಕಾರ ಕೂಡ ಎಂಡೋ ಸಲ್ಫಾನ್ ಶಾಶ್ವತ ನಿಷೇಧ ಮಾಡುವ ನಿಟ್ಟಿನಲ್ಲಿ ಪೂರಕ ಕ್ರಮ ಗಳನ್ನು ಕೈ ಗೊಳ್ಳ ಬೇಕೆಂದು ಒತ್ತಾ ಯಿಸಿದರು. ಜನರ ಆಶೋ ತ್ತರ ಗಳಿಗೆ ರಾಜ್ಯ ಸರ್ಕಾರ ಸ್ಪಂದಿ ಸುತ್ತಿದೆ, ಮೀನು ಗಾರರಿಗೆ ನೆರವು ನೀಡು ವುದರಲ್ಲಿ ರಾಜ್ಯ ದೇಶಕ್ಕೆ ಮಾದರಿಯಾಗಿದ್ದು, ಶ್ರಮ ಜೀವಿಗಳ ನೆರವಿಗೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.