Saturday, April 16, 2011

ಸ್ವಾವಲಂಬಿ ಬದುಕಿಗೆ ಸಮಗ್ರ ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.16:ಮೀನುಗಾರರು,ನೇಕಾರರು,ರೈತರ ವಿಶೇಷ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದ್ದು, ಶ್ರಮ ಜೀವಿಗಳು ಸ್ವಾವಲಂಬಿಗಳಾಗಿ ಬದುಕಲು ಪೂರಕ ಯೋಜನೆಗಳಿಗೆ ಸರ್ಕಾರ ನೆರವು ನೀಡಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.



ಅವ ರಿಂದು ಮೀನು ಗಾರರ ಸಂಘ ಟನೆ ಪುರ ಭವ ನದಲ್ಲಿ ಆಯೋ ಜಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೀನು ಮಾರಾಟ ಮಹಿ ಳೆಯ ರಿಗೆ ಸಾಲ ವಿತ ರಣಾ ಸಮಾ ರಂಭ ದಲ್ಲಿ ಮಾತ ನಾಡು ತ್ತಿದ್ದರು. ಸರ್ಕಾರ 50,000 ರೂ. ಮುಂಗ ಡವನ್ನು ಶೇ. 3ರ ದರ ದಲ್ಲಿ ಮೀನು ಗಾರರಿಗೆ ನೀಡಿದೆ. ಮುಲ್ಕಿ,ಉಳ್ಳಾಲ, ಸೋಮೇ ಶ್ವರದ 2,400 ಮೀನು ಗಾರ ಮಹಿಳೆ ಯರನ್ನು ಗುರು ತಿಸಿದ್ದು ಮಹಿಳಾ ಮೀನು ಗಾರ ರಿಗೆ 12 ಕೋಟಿ ರೂ.ಗಳ ಸಾಲ ವಿತ ರಣೆ ಯಾಗಿದೆ. ಮೀನು ಗಾರ ಮಹಿಳೆ ಯರಿಗೆ ನೆರವು ನೀಡುವ ಮೂಲಕ ಮಹಿಳಾ ಸಬ ಲೀಕ ರಣದ ಐತಿ ಹಾಸಿಕ ಉಪ ಕ್ರಮಕ್ಕೆ ದ.ಕ. ಜಿಲ್ಲೆ ಹೊಸ ಭಾಷ್ಯ ಬರೆದಿದೆ ಎಂದರು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ವಿ ಎಸ್ ಆಚಾರ್ಯ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ರಾಜ್ಯ ಬಾಲಭವನ ಅಧ್ಯಕ್ಷೆ ಸುಲೋಚನಾ ಭಟ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮನಿಪ್ಪಾಡಿ ಉಪಸ್ಥಿತರಿದ್ದರು.ರಾಮಚಂದ್ರ ಬೈಕಂಪಾಡಿ ಸ್ವಾಗತಿಸಿದರು.