Thursday, April 7, 2011

ಡಾ| ಎ.ಎಸ್.ರಾವ್ ಬೀಳ್ಕೊಡುಗೆ 'ಅವಿಸ್ಮರಣೀಯ ಸೇವಾನುಭವ'

ಮಂಗಳೂರು,ಏಪ್ರಿಲ್,07:ದಕ್ಷಿಣ ಕನ್ನಡದಲ್ಲಿ ಪೊಲೀಸ್ ವರಿಷ್ಠಾಕಾರಿಯಾಗಿ ಸೇವೆ ಸಲ್ಲಿಸಿದ್ದ ದಿನಗಳು ಅತ್ಯಂತ ಅವಿಸ್ಮರಣೀಯ. ಪೊಲೀಸ್ ಇಲಾಖೆಗೆ ಅದು ಅಗ್ನಿ ಪರೀಕ್ಷೆಯ ಕಾಲಘಟ್ಟ ಅಂತಹ ಸಮಯದಲ್ಲಿ ಇಲ್ಲಿಗೆ ಎಸ್ಪಿಯಾಗಿ ಬಂದೆ. ಆಮೇಲೆ ನಡೆದ ಘಟನೆಗಳು ತನ್ನ ಸೇವಾವಧಿಯಲ್ಲಿ ಮರೆಯಲಾಗದ ದಿನಗಳಾಗಿ ದಾಖಲಾದವು ಎಂದು ನಿರ್ಗಮನ ಎಸ್ಪಿ ಡಾ| ಎ.ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.
ದ.ಕ.ಜಿಲ್ಲಾಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ಬುಧವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ|ರಾವ್ ಮಾತನಾಡಿದರು.
ಉತ್ತಮ ಕೆಲಸ ಕ್ಕೆ ಜಿಲ್ಲೆ ಯಲ್ಲಿ ಸಿಗು ತ್ತಿದ್ದ ಸ್ಪಂದನೆ ಯಿಂದ ಪ್ರೋತ್ಸಾ ಹಿತ ನಾದೆ; ದಕ್ಷಿಣ ಕನ್ನಡ ಜಿಲ್ಲೆಯ ಸಹ ಕಾರಕ್ಕೆ ಚಿರ ಋಣಿ ಎಂದು ಹೇಳಿದ ಡಾ| ರಾವ್, ಜಿಲ್ಲೆ ಯಲ್ಲಿ ಶಾಂತಿ -ಸುವ್ಯವಸ್ಥೆ ಮರು ಸ್ಥಾಪಿಸು ವಲ್ಲಿ ಜನತೆ, ಹಿರಿಯ ಅಧಿ ಕಾರಿ ಗಳು ಹಾಗೂ ಸಹೋ ದ್ಯೋಗಿ ಗಳು ನೀಡಿದ ಸಹಕಾರ ಅಪಾರ ಎಂದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಅವರು ಜಿಲ್ಲೆಯಲ್ಲಿ ಹಲವಾರು ಬದಲಾವಣೆ ಗಳನ್ನು ತಂದ ಉತ್ತಮ ಅಧಿಕಾರಿ ಎಂದು ಡಾ| ಎ.ಎಸ್. ರಾವ್ ಅವರನ್ನು ಬಣ್ಣಿಸಿದರು.ದ.ಕ.ಜಿಲ್ಲಾ ಎಸ್ಪಿ ಲಾಬುರಾಮ್ ಡಾ.ಎ.ಎಸ್.ರಾವ್ ರವರ ಕರ್ತವ್ಯ ಪ್ರೀತಿಯನ್ನು ಕೊಂಡಾಡಿದರು.ದ.ಕ.ಜಿಲ್ಲಾ ಹೆಚ್ಚುವರಿ ಜಿಲ್ಲಾಧಿ ಕಾರಿ ಎಸ್.ಎ. ಪ್ರಭಾಕರ ಶರ್ಮ, ಪುತ್ತೂರು ವಿಭಾಗದ ಸಹಾ ಯಕ ಪೊಲೀಸ್ ಅಧೀ ಕ್ಷಕಿ ಡಾ| ರೋಹಿಣಿ ಕಟೋಚ, ಡಿಸಿ ಐಬಿ ಇನ್ಸ್ ಪೆಕ್ಟರ್ ವೆಂಕಟೇಶ ಪ್ರಸನ್ನ , ದ.ಕ.ಜಿಲ್ಲಾ ಸ್ಪೆಷಲ್ ಬ್ರಾಂಚ್ ಉಪ ನಿರೀ ಕ್ಷಕ ನಂದಕುಮಾರ್, ಬೆರಳಚ್ಚು ವಿಭಾಗದ ಪ್ರಭಾರ ಡಿವೈಎಸ್ಪಿ ಹರೀಶ್ಚಂದ್ರ ಹೆಜಮಾಡಿ, ನಿರ್ಗಮನ ಎಸ್ಪಿ ರಾವ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್ ಮಾತನಾಡಿ, ಡಾ| ಸುಬ್ರಹ್ಮಣ್ಯೇಶ್ವರ ರಾವ್ ಅವರ ಪ್ರಥಮ ಭೇಟಿಯನ್ನು ಸ್ಮರಿಸಿದರಲ್ಲದೆ ಅಧಿಕಾರಿಯ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಪ್ರಶಂಸಿಸಿದರು. ಅವರ ತಂಡವನ್ನು ಮುನ್ನಡೆಸುವ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಡಾ| ರಾವ್ ಕೇಂದ್ರ ಸೇವೆಗೆ ನಿಯೋಜನೆಗೊಳ್ಳುತ್ತಿದ್ದಾರೆ. ಅವರು ಸಿಬಿಐಗೆ ತೆರಳುತ್ತಿರುವುದು ಕರ್ನಾಟಕದ ಪೊಲೀಸ್ ಇಲಾಖೆ ಹೆಮ್ಮೆ ಪಡುವ ಸಂಗತಿಯಾಗಿದೆ; ಆದರೆ ರಾಜ್ಯ ಪೊಲೀಸ್ ಅವರ ಸೇವೆ ಯನ್ನು ಮುಂದಿನ ದಿನ ಗಳಲ್ಲಿ ಸದ್ಬಳಕೆ ಮಾಡಿ ಕೊಳ್ಳಲಿದೆ ಎಂದರು.ಅಪ ರಾಧ ಪತ್ತೆ ಗಾಗಿ ಡಾ| ರಾವ್ ಜಾರಿಗೆ ತಂದ ಉಪಕ ರಣಗಳ ಪೆಟ್ಟಿಗೆ ರಾಜ್ಯದ ಪೊಲೀಸ್ ಇಲಾಖೆ ಗೆ ಮಾದರಿ ಯಾಗಿದೆ ಮತ್ತು ಪ್ರಶಂಸಿ ಸಲ್ಪಟ್ಟಿದೆ ಎಂದರು.ಯೋಚನೆ, ಯೋಜನೆ, ಸಮರ್ಪಕ ಅನುಷ್ಠಾನ ಅವರ ನಾಯ ಕತ್ವದ ಗುಣಗಳು ಎಂದರು.
ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಎಂ.ಮುತ್ತುರಾಯ ಹಾಗೂ ಡಾ| ದೀಪ್ತಿ ಎಸ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚುವರಿ ಎಸ್ಪಿ ಎಂ,ಪ್ರಭಾಕರ್ ಸ್ವಾಗತಿಸಿದರು. ಡಿಸಿಆರ್ ಬಿ ಡಿವೈಎಸ್ಪಿ ಬಿ.ಜೆ.ಭಂಡಾರಿ ವಂದಿಸಿದರು. ಲೆನೆಟ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು.