Tuesday, April 12, 2011

ದ.ಕ.ದಲ್ಲಿ ಏ.27-28ರಂದು ಗಡಿ ಉತ್ಸವ, ಜೂನ್ ನಲ್ಲಿ ಗಡಿ ಸಮಸ್ಯೆ ಕುರಿತ ಪುಸ್ತಕ ಸಿದ್ಧ: ಬೆಲ್ಲದ

ಮಂಗಳೂರು,ಏಪ್ರಿಲ್.12: ಗಡಿನಾಡ ಸಾಂಸ್ಕೃತಿಕ ಉತ್ಸವಗಳ ಮೂಲಕ ಗಡಿ ಪ್ರದೇಶದ ಸಮಸ್ಯೆಗಳನ್ನು ದಾಖಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಗುರಪ್ಪ ಬೆಲ್ಲದ ಹೇಳಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗಡಿ ಪ್ರದೇಶದ ಅಭಿವೃದ್ಧಿ ಹಾಗೂ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನಾಡಿನ ಗಡಿ ಪ್ರದೇಶದ ಸ್ಥಳೀಯ ಸಮಸ್ಯೆ, ಕಡಲ್ಕೊರೆತ, ಪ್ರವಾಸೋದ್ಯಮ, ಪರಿಸರ, ಶಿಕ್ಷಣ, ಸಾಂಸ್ಕೃತಿಕ ಅಂಶಗಳು ಭಾಷಾ ಅಳಿವು ಉಳಿವಿನ ಸಮಸ್ಯೆ ಸೇರಿದಂತೆ ಸ್ಥಳೀಯ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಗಡಿನಾಡ ಉತ್ಸವದ ಮೂಲಕ ಪ್ರತಿಯೊಂದು ಕಡೆ ಸಮಸ್ಯೆಗಳನ್ನು ದಾಖಲಿಸುವ ಕೆಲಸ ಆಗುತ್ತಿದೆ. ಎರಡು ದಿನದ ಉತ್ಸವದಲ್ಲಿ ಗಡಿನಾಡ ಸಮಸ್ಯೆಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಏ.27 ಮತ್ತು 28 ರಂದು ಗಡಿನಾಡ ಉತ್ಸವ ನಡೆಯಲಿದ್ದು, ಇದಕ್ಕಾಗಿ ಸೂಕ್ತ ಸ್ಥಳವನ್ನು ಗೊತ್ತುಪಡಿಸಲಾಗುವುದು ಎಂದರು.
ಈಗಾಗಲೇ ಐದು ಗಡಿ ರಾಜ್ಯದ ಅಂಚಿನಲ್ಲಿರುವ 19 ಜಿಲ್ಲೆಯ 52 ತಾಲೂಕುಗಳಿಗೆ ಭೇಟಿ ನೀಡಿದ್ದೇನೆ. ಚಾಮರಾಜನಗರ, ಉತ್ತರ ಕನ್ನಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಗಡಿನಾಡ ಉತ್ಸವ ನಡೆದಿದ್ದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಸರಕಾರ ಈಗಾಗಲೇ ಪ್ರಾಧಿಕಾರಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ಗಡಿನಾಡ ಉತ್ಸವಕ್ಕೆ ತಲಾ ನಾಲ್ಕು ರೂ. ಲಕ್ಷ ಒದಗಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೂಡ ಇದರಲ್ಲಿ ಕೈಜೋಡಿಸಬೇಕು. ಒಟ್ಟು 100 ಕೋಟಿ ಅನುದಾನಕ್ಕಾಗಿ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಬೆಲ್ಲದ ನುಡಿದರು.ಗಡಿ ಪ್ರದೇಶಲ್ಲಿ ಶಿಕ್ಷಕರಿ ಗಾಗಿ ವಸತಿ ಗೃಹ ಗಳು, ಗ್ರಂಥಾ ಲಯ ಕಟ್ಟಡ ಗಳು, ಸಾಂಸ್ಕೃ ತಿಕ ಚಟು ವಟಿ ಕೆಗ ಳಿಗಾಗಿ ಬಯಲು ರಂಗ ಮಂದಿರ ನಿರ್ಮಿ ಸಲು ಇಲಾಖೆ ಒತ್ತು ನೀಡಿದೆ. ಗಡಿ ಪ್ರದೇ ಶದ ಗ್ರಾ ಮೀಣ ಶಾಲೆ ಗಳಲ್ಲಿ ಶಿಕ್ಷಕ ರಿಗೋ ಸ್ಕರ ವಸತಿ ಗೃಹ, ಗ್ರಂಥಾ ಲಯ, ಕ್ರೀಡಾ ಚಟು ವಟಿಕೆ ಪ್ರೋತ್ಸಾ ಹಿಸಲು ಗಡಿ ಅಭಿ ವೃದ್ಧಿ ಪ್ರಾಧಿ ಕಾರ ದಿಂದ ನೆರವು ನೀಡ ಲಾಗುವುದು ಎಂದ ಬೆಲ್ಲದ ಅವರು, ಗ್ರಾಮೀಣ ಮಕ್ಕಳ ಆಸಕ್ತಿಯನ್ನು ಗಮನಿಸಿ ಬೇಡಿಕೆಗಳ್ನನ್ನು ಪೂರೈಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಲ್ಲದೆ ಅಗತ್ಯವಾಗಿ ಬಯಲು ರಂಗಮಂದಿರವನ್ನು ನಿರ್ಮಿಸಬೇಕು ಎಂದರು. ಡಿಡಿಪಿಐ ಸಿ.ಚಾಮೇಗೌಡ, ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ್ ನಾಗಮ್ಮನವರ್, ದ.ಕ. ಜಿಲ್ಲಾ ಅಪರ ಜಿಲ್ಲಾಕಾರಿ ಪ್ರಭಾಕರ ಶರ್ಮಾ,ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು.