Monday, April 25, 2011

ಮನಪಾಗೆ' ಗ್ರೀನ್ ಲೀಫ್ ' ಪ್ರಶಸ್ತಿಯ ಗರಿ

ಮಂಗಳೂರು,ಏಪ್ರಿಲ್.25:ಮಂಗಳೂರು ಮಹಾನಗರ ಪಾಲಿಕೆಗೆ ಘನ ತಾಜ್ಯ ನಿರ್ವಹ ಣೆಗಾಗಿ ಪ್ರತಿಷ್ಟಿತ ಗ್ರೀನ್ ಲೀಫ್ ಪ್ರಶಸ್ತಿ ದೊರೆ ತಿದೆ.ಹೈದ್ರಾ ಬಾದ್ ನಲ್ಲಿ ನಡೆದ 'ಕ್ಲೀನ್ ಇಂಡಿಯಾ 2011'ರಾಷ್ಟ್ರೀಯ ಸಮ್ಮೇಳ ನದಲ್ಲಿ ಚಿತ್ರನಟಿ ಅಮಲಾ ಅವರು ಪ್ರಶಸ್ತಿ ಯನ್ನು ಪ್ರದಾನ ಮಾಡಿದರು.ಮಂಗಳೂರು ಮೇಯರ್ ಪ್ರವೀಣ್,ಆಯುಕ್ತರಾದ ಡಾ. ವಿಜಯಪ್ರಕಾಶ್,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನ ಕಳಿಯ,ಆರೊಗ್ಯಧಿಕಾರಿ ಮಂಜಯ್ಯ ಶೆಟ್ಟಿ,ಇಂಜಿನೀಯರ್ ಮಂಜುನಾಥ್ ಅವರು ಪಾಲಿಕೆ ಪರವಾಗಿ ಪ್ರಶಸ್ತಿಯನ್ನು ಪಡಕೊಂಡರು.