Saturday, April 16, 2011

ಲೇಡಿಗೋಶನ್ ಆಸ್ಪತ್ರೆಅಭಿವೃದ್ಧಿ: 18 ಕೋಟಿ ರೂ.ಗಳ ಕಟ್ಟಡಕ್ಕೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

ಮಂಗಳೂರು,ಏಪ್ರಿಲ್.16:ನಗರದ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಗೆ ಆಂಧ್ರ ಪ್ರದೇಶದ ಉದ್ಯಮಿ ರಾಘವ ನಾಯ್ಡು ಅವರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಿರುವ ಎಂಟು ಅಂತಸ್ತುಗಳ ಮಲ್ಟಿ ಸ್ಪೆಶಾಲಿಟಿ ಕಟ್ಟಡಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಮುಖ್ಯ ಮಂತ್ರಿ ಗಳು, ರಾಜ್ಯ ದಲ್ಲಿ ದಾನಿ ಗಳ ಕೊರತೆ ಇಲ್ಲ ವೆಂಬುದು ಅತಿ ವೃಷ್ಟಿ ಯಲ್ಲಿ ನಲು ಗಿದಾ ಗಲೇ ಸಾಬೀತಾ ಗಿದ್ದು, ದಾನಿ ಗಳನ್ನು ಪ್ರೇರೇಪಿ ಸುವಂತ ಹ ಕೆಲಸ ವಾಗ ಬೇಕಿದೆ. ಅಂತಹ ಕೆಲಸಕ್ಕೆ ಇಂದಿನ ಸಮಾ ರಂಭ ಸಾಕ್ಷಿ ಯಾಗಿದೆ ಎಂದರು. ಮಗಳ ಹೆಸರನ್ನು ಶಾಶ್ವತವಾಗಿಸಲು ಬಡಜನರ ಆರೋಗ್ಯ ಸೇವೆಗಾಗಿ ನೀಡಿದ ದಾನಕ್ಕಾಗಿ ನಾಯ್ಡು ದಂಪತಿಯನ್ನು ರಾಜ್ಯ ಸರಕಾರದ ಪರವಾಗಿ ಅಭಿನಂದಿಸಿದರು. ಯೋಗೀಶ ಭಟ್ ಅವರು ರಾಘವ ನಾಯ್ಡು ಅವರನ್ನು ಪ್ರೇರೇಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗದ ಜನತೆಗೆ ಉತ್ತಮ ಕೊಡುಗೆ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಕಟ್ಟಡ ನಿರ್ಮಾಣದ ಸಂದರ್ಭ ಹಾಗೂ ನಿರ್ವಹಣೆ ಮತ್ತು ಅಗತ್ಯ ಸಲಕರಣೆಗಳಿಗೆ ಸಕಲ ನೆರವು ನೀಡಲು ಸರಕಾರ ಬದ್ಧವಾಗಿದೆ ಎಂದರು. ಇದೇ ವೇಳೆ ಬಿ.ಎಸ್.ಯಡಿ ಯೂರಪ್ಪ ಬಂಟ್ವಾಳದ ಎಸ್ ವಿಎಸ್ ಪ್ರಾಥಮಿಕ ಶಾಲೆಯ ನೂತನ ಕಟ್ಟ ಡಕ್ಕೂ ಒಂದೂ ವರೆ ಕೋಟಿ ರೂ.ಗಳನ್ನು ನಾಯ್ಡು ನೀಡಿದ್ದು, ಸಾಂಕೇ ತಿಕವಾಗಿ ಶಿಲಾ ನ್ಯಾಸ ನೆರ ವೇರಿ ಸಿದರು. ದಾನಿ ಗಳಾದ ರಾಘವ ನಾಯ್ಡು ದಂಪತಿ ಯನ್ನು ಶಾಲು, ಹಾರ, ಫಲ ಪುಷ್ಪ ನೀಡಿ ಮುಖ್ಯ ಮಂತ್ರಿ ಗೌರ ವಿಸಿದರು.ದಾನಿ, ಕೆ.ಆರ್. ಕೀರ್ತಿ ಫೌಂಡೇ ಶನ್ ಟ್ರಸ್ಟ್ ನ ಆಡ ಳಿತ ಟ್ರಸ್ಟಿ ರಾಘವ ನಾಯ್ಡು ಮಾತ ನಾಡಿ, ಶಿಕ್ಷಣ ಮತ್ತು ಆರೋ ಗ್ಯ ಕ್ಷೇ ತ್ರಕ್ಕೆ ಬೆಂಬಲ ನೀಡು ವುದು ಸರ್ವರ ಕರ್ತವ್ಯ ವಾಗಿದೆ. ಕರ್ನಾ ಟಕ ವಿಧಾನ ಸಭೆಯ ಉಪಾ ಧ್ಯಕ್ಷ ಎನ್.ಯೋಗೀಶ ಭಟ್ ಅವರು ಈ ಭಾಗದ ಲೇಡಿ ಗೋಶನ್ ಆಸ್ಪತ್ರೆ ಯ ಅಭಿ ವೃದ್ಧಿ ಯಲ್ಲಿ ತಾನು ಪಾಲ್ಗೊ ಳ್ಳುವ ಅವ ಕಾಶ ಮಾಡಿ ಕೊಟ್ಟಿ ದ್ದಾರೆ. ಒಂದು ವರ್ಷ ದೊಳಗೆ ರೂ. 18 ಕೋಟಿ ವೆಚ್ಚ ದಲ್ಲಿ ತನ್ನ ಕೀರ್ತಿ ಶೇಷ ಪುತ್ರಿ ಕೆ.ಆರ್.ಕೀರ್ತಿ ಯ ಹೆಸರಿ ನಲ್ಲಿ 18 ಅಂತ ಸ್ತುಗಳ ಕಟ್ಟಡ ನಿರ್ಮಿಸಿ ಹಸ್ತಾಂ ತರಿಸ ಲಾಗು ವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಸಭಾಪತಿಗಳಾದ ಎನ್.ಯೋಗೀಶ ಭಟ್, ಲೇಡಿಗೋಶನ್ ಆಸ್ಪತ್ರೆಗೆ ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳುವ 8 ಅಂತಸ್ತುಗಳ ನೂತನ ಕಟ್ಟಡದ ನಿರ್ವಹಣೆಗೆ ವಾರ್ಷಿಕ ರೂ. 2.5 ಕೋಟಿಯ ಅಗತ್ಯವಿದೆ. ಉಪಕರಣಗಳಿಗಾಗಿ ರೂ. 10 ಕೋಟಿ ಬೇಕು. ಮುಖ್ಯಮಂತ್ರಿಗಳು ಈ ಅನುದಾನ ಒದಗಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬಳಿ ಸುಪರ್ ಸ್ಪೆಶಾಲಿಟಿ ಬ್ಲಾಕ್ ನಿರ್ಮಿಸುವುದು ನನ್ನ ಮುಂದಿನ ಗುರಿ. ಅದಕ್ಕಾಗಿ ರೂ. 100 -150 ಕೋಟಿ ಅನುದಾನ ಅಗತ್ಯವಿದೆ. ದಾನಿಗಳನ್ನು ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ| ಅರುಣಾ, ದ.ಕ.ಜಿ.ಪಂ. ಮುಖ್ಯ ಕಾರ್ಯ ನಿವರ್ಾಹಕ ಅಕಾರಿ ಪಿ. ಶಿವಶಂಕರ್, ಮನಪಾ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಶಕುಂತಳಾ ಸ್ವಾಗತಿಸಿದರು. ಹಿರಿಯ ತಜ್ಞೆ ಡಾ| ಜೆ.ಪೂರ್ಣಿಮಾ ವಂದಿಸಿದರು.