Friday, April 29, 2011

ಸರ್ಕಿಟ್ ಹೌಸ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು,ಏಪ್ರಿಲ್.29:ಮಂಗಳೂರಿನ ಕದ್ರಿ ಹಿಲ್ಸ್ ನಲ್ಲಿ ಸುಸಜ್ಜಿತ ನೂತನ ಸರ್ಕಿಟ್ ಹೌಸ್ ನ್ನು ನಿರ್ಮಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿ, 300.00 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, 23.8.10ರಂದು ಕಾಮಗಾರಿಯ ನಿವೇಶನವನ್ನು ಖುದ್ದಾಗಿ ಪರಿಶೀಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಮಾರ್ಗದರ್ಶನ ನೀಡಿದ್ದರು.

ಈ ಕಟ್ಟಡದ ಕಾಮ ಗಾರಿಯ ಶಿಲಾ ನ್ಯಾಸ ವನ್ನು ಮುಖ್ಯ ಮಂತ್ರಿ ಗಳಿಂದು ನೆರವೇ ರಿಸಿದರು. 1339.00 ಚದರ ಮೀಟರ್ ವ್ಯಾಪ್ತಿಯ ಎರಡು ಅಂತ ಸ್ತುಗಳ ಅತಿ ಗಣ್ಯ ವ್ಯಕ್ತಿ ಗಳಿಗೆ ಸೂಟ್ -1, ಗಣ್ಯ ವ್ಯಕ್ತಿ ಗಳಿ ಗಾಗಿ ಸುಸಜ್ಜಿತ ಸೂಟ್ 6 ಸಂಖ್ಯೆ, ಡೈನಿಂಗ್ ಹಾಲ್, ಅಡುಗೆ ಕೋಣೆ ಸಹಿತ, ಸಭಾಂಗಣ 40 ಸೀಟು ಗಳ ಅವಕಾಶ, ವೈಟಿಂಗ್ ಲಾಂಜ್, ಸ್ವಾಗತ ಕಾರರ ಕೌಂಟರ್, ಕಾರ್ ಪೋಚ್ , ಲಿಫ್ಟ್, ಅಗ್ನಿ ಶಾಮಕ ಸೌಲಭ್ಯ ಗಳನ್ನೊ ಳಗೊಂಡ ಕಟ್ಟಡದ ನಿರ್ಮಾಣಕ್ಕೆ ಗುತ್ತಿಗೆ ನಿಗದಿ ಪಡಿಸುವ ಕಾಮ ಗಾರಿ ಪ್ರಕ್ರಿಯೆ ಪ್ರಗತಿ ಯಲ್ಲಿದೆ.
ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು, ಸಂಸದರಾದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕರಾದ ಮಲ್ಲಿಕಾ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ. ಟಿ ಶೈಲಜಾ ಭಟ್,ಮೇಯರ್ ಪ್ರವೀಣ್,ಉಪಮೇಯರ್ ಗೀತಾ ನಾಯಕ್,ಜಿಲ್ಲಾಧಿಕಾರಿ ಸುಬೋಧ್ ಯಾದವ್, ಐಜಿಪಿ ಅಲೋಕ್ ಮೋಹನ್, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತರಾದ ಡಾ ಕೆ. ಎನ್ ವಿಜಯಪ್ರಕಾಶ್, ಸಿಇಒ ಪಿ. ಶಿವಶಂಕರ್ ಉಪಸ್ಥಿತರಿದ್ದರು.