Friday, April 8, 2011

ಸರಕಾರಿ ಸ್ಥಳಗಳಲ್ಲಿ ತ್ಯಾಜ್ಯ ಎಸೆದಲ್ಲಿ ದೂ.ಸಂ. 2220306 ಕ್ಕೆ ಕರೆಮಾಡಿ ತಿಳಿಸಿ

ಮಂಗಳೂರು,ಎಪ್ರಿಲ್.08:ಮಂಗಳೂರು ಮಹಾನಗರಪಾಲಿಕಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಮತ್ತು ಸರಕಾರಿಖಾಲಿ ಸ್ಥಳಗಳಲ್ಲಿ ನಿರುಪಯುಕ್ತ ಕಟ್ಟಡ ತ್ಯಾಜ್ಯತ ವಸ್ತು ಮತ್ತು ಕಸಕಡ್ಡಿಗಳನ್ನು ಎಸೆದು ನಗರ ನೈರ್ಮಲ್ಯಕ್ಕೆ ಮತ್ತು ಪರಿಸರಕ್ಕೆ ಮಾಲಿನ್ಯವನ್ನುಂಟು ಮಾಡುತ್ತಿರುವುದಲ್ಲದೆ ಪಾದಾಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ರಸ್ತೆ ಬದಿಯಲ್ಲಿ ಹಾಗೂ ಸರಕಾರಿ ಸ್ಥಳಗಳಲ್ಲಿ ನಿರುಪಯುಕ್ತ ಕಟ್ಟಡ ತ್ಯಾಜ್ಯ ಮತ್ತು ಕಸಕಡ್ಡಿಗಳನ್ನು ವಾಹನಗಳಲ್ಲಿ ತಂದು ಎಸೆಯಬಾರದು.ಎಸೆದಲ್ಲಿ ಅಂತಹವರ ವಿಕರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು. ಸ್ಥಳೀಯರು ಇಂತಹ ವಾಹನಗಳ ನಂಬರ್ ಗುರುತಿಸಿ ಕೂಡಲೇ ನಗರಪಾಲಿಕೆಯ ದೂ.ಸಂ.2220306 ಕ್ಕೆ ಕರೆಮಾಡಿ ತಿಳಿಸಲು ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿರುತ್ತಾರೆ