Saturday, April 9, 2011

ಉತ್ತಮ ಆಡಳಿತಕ್ಕೆ ಲೋಕಪಾಲ್ ಮಸೂದೆ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.09:ದೇಶ ಭ್ರಷ್ಟಾಚಾರ ಮುಕ್ತ ಮತ್ತು ಉತ್ತಮ ಆಡಳಿತಕ್ಕೆ ಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.


ಅವರಿಂದು ಬಜಪೆ ಯಲ್ಲಿ ಪತ್ರಕರ್ತ ರೊಂದಿಗೆ ಮಾತ ನಾಡುತ್ತಾ,ಲೋಕ ಪಾಲ್ ಕಾಯಿದೆಯ ಅನುಷ್ಠಾನ ದಿಂದ ಪ್ರಜೆ ಗಳಿಗೆ ಅನು ಕೂಲವಾ ಗಲಿದ್ದು, ಉತ್ತಮ ಆಡಳಿತ ದೊರೆ ಯಲಿದೆ ಎಂದರು. ಪ್ರಧಾನ ಮಂತ್ರಿಗಳು ಈ ಸಂಬಂಧ ರಾಜ್ಯದ ಎಲ್ಲ ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ಕಾಯಿದೆ ಜಾರಿಗೆ ತರ ಬೇಕೆಂದು ಸಲಹೆ ಮಾಡಿದರು. ಮುಖ್ಯ ಮಂತ್ರಿಯವರೊಡನೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಜಿ.ಪಂ. ಅಧ್ಯಕ್ಷರಾದ ಶೈಲಜಾ ಕೆ.ಟಿ., ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ, ಐಜಿಪಿ ಅಲೋಕ್ ಮೋಹನ್ ಒಳಗೊಂಡಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.