Saturday, April 30, 2011

ಮಂಗಳಗಂಗೋತ್ರಿಯಲ್ಲಿ 29ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು,ಏಪ್ರಿಲ್.30:ಮಂಗಳ ಗಂಗೋತ್ರಿಯಲ್ಲಿ



ಇಂದು 29ನೇ ವಾರ್ಷಿಕ ಘಟಿ ಕೋತ್ಸವ ನೆರ ವೇರಿತು. ಕರ್ನಾಟಕ ರಾಜ್ಯದ ಗೌರವ್ವನಿತ ರಾಜ್ಯ ಪಾಲರು ಹಾಗೂ ಮಂಗ ಳೂರು ವಿಶ್ವ ವಿದ್ಯಾ ನಿಲಯದ ಕುಲಾಧಿ ಪತಿಗಳಾದ ಹೆಚ್. ಆರ್ ಭಾರ ದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ವಿಶ್ವ ವಿದ್ಯಾ ನನಿಲಯದ ಸಹ ಕುಲಾಧಿ ಪತಿಗಳಾದ ಡಾ. ವಿ. ಎಸ್. ಆಚಾರ್ಯ ಉಪ ಸ್ಥಿತರಿದ್ದರು. ಸರ್ವೋಚ್ಛ ನ್ಯಾಯಾ ಲಯದ ನಿವೃತ್ತ ಮುಖ್ಯ ನ್ಯಾಯಾ ಧೀಶರಾದ ನ್ಯಾಯಮೂರ್ತಿ ಎಂ. ಎನ್. ವೆಂಕಟಾ ಚಲಯ್ಯ ಘಟಿ ಕೋತ್ಸವ ಭಾಷಣ ದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ದರಲ್ಲದೆ ಆಯ್ಕೆಯ ಸಂದರ್ಭ ದಲ್ಲಿ ಎಚ್ಚರಿಕೆ ಯಿಂದ ಉತ್ತಮ ವಾದುದನ್ನು ಆರಿಸಿ ಎಂದು ಸಲಹೆ ಮಾಡಿದರು. ವಿಶ್ವ ವಿದ್ಯಾ ನಿಲಯ ಗಳು ವಿದ್ಯಾರ್ಥಿ ಗಳಲ್ಲಿ ಕ್ರಿಯಾ ಶಕ್ತಿಗೆ ಪೂರಕ ವಾತಾವರಣ ಒದಗಿಸಬೇಕು. ಮಾನವ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಪರಸ್ಪರ ಪೂರಕ ವಿಷಯಗಳಾಗಿದ್ದು ಸಮಗ್ರ ಬೆಳವಣಿಗೆಯ ಬಗ್ಗೆಗಿನ ದೃಷ್ಟಿಕೋನದ ಬಗ್ಗೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಾಜಿ ಡಿಜಿಪಿ ಡಾ. ಅಜಯ್ ಕುಮಾರ್ ಸಿಂಗ್, ಬನ್ನಂಜೆ ಗೋವಿಂದಾಚಾರ್ಯ, ಡಿ ಕೆ ಚೌಟ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರ ಮೂರ್ತಿಯವರು ಸ್ವಾಗತ ಭಾಷಣ ಮಾಡಿದರು.ಕಲಾವಿಭಾಗದ 16, ವಿಜ್ಞಾನದಿಂದ 47, ವಾಣಿಜ್ಯ ವಿಭಾಗದಿಂದ 5, ಶಿಕ್ಷಣ 2 ರಿಗೆ ಒಟ್ಟು 70 ಡಾಕ್ಟರ್ ಆಫ್ ಫಿಲಾಸಫಿ, 87 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಯಿತು.