ಮಂಗಳೂರು,ಫೆಬ್ರವರಿ.28: ಮಂಗಳೂರು ಮಹಾನಗರ ಪಾಲಿಕೆಯ
ನೂತನ ಮೇಯರಾಗಿ ದೇರೆಬೈಲು ದಕ್ಷಿಣ ವಾರ್ಡಿನ ಸದಸ್ಯರಾದ ಪ್ರವೀಣ್ ಅವರು ಮತ್ತು ಉಪ ಮೇಯರ್ ಆಗಿ ಮಣ್ಣಗುಡ್ಡ ವಾರ್ಡಿನ ಸದಸ್ಯೆ ಗೀತಾ ಎನ್. ನಾಯಕ್ ಅವರು ಆಯ್ಕೆ ಯಾಗಿ ದ್ದಾರೆ.ಇಂದು ಪಾಲಿಕೆಯ ಸಭಾಂ ಗಣದಲ್ಲಿ ನಡೆದ ಚುನಾ ವಣೆಯಲ್ಲಿ ನಿರೀಕ್ಷೆ ಯಂತೆ ಬಹು ಮತ ಹೊಂದಿದ್ದ ಈ ಬಿಜೆಪಿ ಸದಸ್ಯರು ಮೇಯರ ಮತ್ತು ಉಪ ಮೇಯರ್ ಹುದ್ದೆ ಗಳಿಗೆ ಆಯ್ಕೆ ಗೊಂಡರು. ಮೈಸೂರು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರೀಯೆಗಳನ್ನು ನಡೆಸಿಕೊಟ್ಟರು.ಉಪ ಆಯುಕ್ತ ಮಂಜುನಾಥ ನಾಯಕ್,ಪಾಲಿಕೆ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಅವರು ಉಪಸ್ಥಿತರಿದ್ದರು.