ಇತ್ತೀಚಿನ ಉಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯತ್ ಗಳು ಪರಿಸರಕ್ಕೆ ದಕ್ಕೆ ತರುವುದಿಲ್ಲ ಮತ್ತು ನದಿ ಪಾತ್ರಗಳನ್ನು ಮಲಿನಗೊಳಿಸುವುದಿಲ್ಲ ಎಂಬುದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು.ಒಂದು ವೇಳೆ ಇದಕ್ಕೆ ತಪ್ಪಿದರೆ ಅಂತಹ ಗ್ರಾಮ ಪಂಚಾಯತ್ ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದರು.ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯ ಹಾಗೂ ಕುಟಂಬ ಕಲ್ಯಾಣಾಧಿಕಾರಿ ಡಾ.ಓ.ರಂಗಪ್ಪ ಅವರ ಮಾತನಾಡಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಸಂಬಂಧಿಸಿದ ಗ್ರಾಮ ಪಂಚಾಯತ್ ಗಳು ಮುಂದೆ ಬರಬೇಕೆಂದರು.ಜಿಲ್ಲಾ ಮಟ್ಟದಲ್ಲಿ ರಜತ ನೈರ್ಮಲ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಇತರ ಗ್ರಾಮ ಪಂಚಾಯತ್ ಗಳೆಂದರೆ ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ದ್ವಿತೀಯ ಬಹುಮಾನ ರೂ.2.00 ಲಕ್ಷ ಹಾಗೂ ಪುತ್ತೂರು ತಾಲೂಕಿನ ನೆಕ್ಕಿಲಾಡಿ ತೃತೀಯ ರೂ 1.00 ಲಕ್ಷ ಬಹುಮಾನ ಪಡೆದಿವೆ. ಫೆಬ್ರವರಿ 26 ರಂದು ರಾಜ್ಯ ಮಟ್ಟದ ಪುರಸ್ಕಾರ ಪ್ರಧಾನ ಸಮಾರಂಭ ಮಂಗಳೂರಿನಲ್ಲಿ ಜರುಗಲಿದ್ದು ಮಾನ್ಯ ಮಖ್ಯಮಂತ್ರಿಗಳಾದಿಯಾಗಿ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಉಪ ಕಾರ್ಯದರ್ಶಿ ಕೆ.ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ಜೆ.ತಾಕತ್ ರಾವ್ ಮುಂತಾದವರು ಹಾಜರಿದ್ದರು.