Sunday, February 27, 2011

'ಸುಸ್ಥಿರ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು'

ಮಂಗಳೂರು, ಫೆ.27: ಸುಸ್ಥಿರ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಎಂ. ಎಂ. ಕಾಮತ್ ನುಡಿದರು. ಅವರು ಶನಿವಾರ ನಗರದಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಇಂಜಿನಿಯರ್ ಅಸೋಸಿಯೇಷನ್ ಅವರು ಏರ್ಪಡಿಸಿದ್ದ 'ಸುಸ್ಥಿರ ನಗರಾಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ' ಕುರಿತ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ನೀಡುತ್ತಿದ್ದರು.ಅಭಿ ವೃದ್ಧಿ ಕಾರ್ಯ ಯೋಜನೆ ಗಳು ಸಮಾ ಜದ ಕಟ್ಟ ಕಡೆಯ ವ್ಯಕ್ತಿ ಯನ್ನು ತಲುಪು ವುದು, ಸೌಲಭ್ಯ ಗಳು ಪ್ರತಿ ಯೊಬ್ಬ ರಿಗೂ ತಲು ಪುವ ಧ್ಯೇಯ ಹೊಂದಿ ರಬೇಕು ಎಂದ ಅವರು, ಬಡ ತನ ನಿರ್ಮೂ ಲನೆ ಯಲ್ಲಿ ಪ್ರಮುಖ ಪಾತ್ರ ವನ್ನು ಇಂಜಿ ನಿಯರ್ ಗಳು ವಹಿಸ ಬೇಕೆಂದ ರು.ಕೆಡಿಕೆ ಯುಇಎ ಅಧ್ಯಕ್ಷ ರಾದ ಇಂಜಿ ನಿಯರ್ ಎಸ್. ಇ. ಬಾಲ ಕೃಷ್ಣ ಅವರು ತಮ್ಮ ಅಧ್ಯಕ್ಷೀ ಯ ನುಡಿ ಯಲ್ಲಿ ಕ್ಷಿಪ್ರ ಗತಿಯ ಪ್ರಗತಿ ಯಲ್ಲಿ ಇಂಜಿ ನಿಯರ್ ಗಳ ಪಾತ್ರದ ಬಗ್ಗೆ ವಿವರಿ ಸಿದರು. ಎನ್ ಐ ಟಿ ಕೆ ಯ ನಿವೃತ್ತ ಪ್ರೊಫೆ ಸರ್ ಡಾ. ಆರ್ ಕೆ ಯಾಜಿ ಅವರು ಸುಸ್ಥಿರ ಅಭಿ ವೃದ್ಧಿಗೆ ಅತ್ಯು ತ್ತಮ ತಾಂತ್ರಿ ಕತೆಯ ಅಗತ್ಯ ವನ್ನು ಪ್ರತಿ ಪಾದಿ ಸಿದರು. ಮೂಲ ಸೌಕರ್ಯ ಅಭಿ ವೃದ್ಧಿ ರಸ್ತೆ ಮತ್ತು ಸಾರ್ವ ಜನಿಕ ಆರೋ ಗ್ಯದ ಕುರಿತು ಪ್ರೊ. ಡಾ. ಕೆ. ಎಸ್. ಬಾಬು ನಾರಾಯಣ್ ಮಾತನಾಡಿದರು. ಅಗ್ನಿ ಸುರಕ್ಷತೆ ಬಗ್ಗೆ ಅಗ್ನಿ ಶಾಮಕ ದಳದ ಅಧಿಕಾರಿ ಎಚ್. ಎಸ್. ವರದರಾಜನ್ ಅವರು ವಿವರಿಸಿದರು.