Saturday, February 12, 2011

ಗೇರು ಮೇಳ 2011 ಮತ್ತು ಗೇರು ಬೆಳೆ ಕ್ಷೇತ್ರೋತ್ಸವ

ಮಂಗಳೂರು,ಫೆಬ್ರವರಿ.12: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ,ಬಾಗಲ ಕೋಟೆ,ತೋಟ ಗಾರಿಕಾ ಸಂಶೋ ಧನಾ ಕೇಂದ್ರ ಉಳ್ಳಾಲ,ಗೇರು ಮತ್ತು ಕೊಕ್ಕೊ ಅಭಿ ವೃದ್ದೀ ನಿರ್ದೇಶ ನಾಲಯ ಕೊಚ್ಚಿನ್,ರಾಷ್ಟ್ರೀಯ ತೋಟ ಗಾರಿಕಾ ಮಿಷನ್ ನವ ದೆಹಲಿ,ತೋಟ ಗಾರಿಕಾ ಇಲಾಖೆ ಮಂಗಳೂರು,ಕೃಷಿ ಇಲಾಖೆ ಮಂಗಳೂರು ಮತ್ತು ಆತ್ಮ ಯೋಜನೆ ಕೃಷಿ ವಿಜ್ಞಾನ ಸಂಸ್ಥೆ ಧರ್ಮಸ್ಥಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಗೇರು ಮೇಳ 2011 ಮತ್ತು ಗೇರು ಬೆಳೆ ತರಬೇತಿ ಮತ್ತು ಗೇರು ಕ್ಷೇತ್ರೋತ್ಸವ ಕಾರ್ಯಕ್ರಮ ಮಂಗಳೂರಿನ ಉಳ್ಳಾಲದ ಗೇರು ಸಂಶೋಧನ ಕೇಂದ್ರದ ಆವರಣದಲ್ಲಿ ಇಂದು ನಡೆಯಿತು.ಸಮಾರಂಭವನ್ನು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯವಸ್ತಾಪಕ ಮಂಡಳಿ ಸದಸ್ಯರಾದ ಎಸ್.ಡಿ. ಸಂಪತ್ ಕುಮಾರ್ ಅವರು ಉದ್ಘಾಟಿಸಿದರು.ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಎಸ್.ಬಿ.ದಂಡಿನ್,ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಲಕ್ಷ್ಮಣ್,ನವೋದಯ ಸ್ವಸಹಾಯ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿರರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.