Tuesday, February 8, 2011

ದ.ಕ.ಜಿ.ಪಂ.ಅಧ್ಯಕ್ಷೆಯಾಗಿ ಕೆ.ಟಿ. ಶೈಲಜಾ ಭಟ್,ಉಪಾಧ್ಯಕ್ಷರಾಗಿ ಧನಲಕ್ಷ್ಮಿ ಜನಾರ್ದನ ಆಯ್ಕೆ

ಮಂಗಳೂರು, ಫೆ.08: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ವಿಟ್ಲ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಕೆ.ಟಿ. ಶೈಲಜಾ ಹಾಗೂ ಉಪಾಧ್ಯಕ್ಷರಾಗಿ ಧರ್ಮಸ್ಥಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಜಯಗಳಿಸಿದ್ದ ಧನಲಕ್ಷ್ಮಿ ಜನಾರ್ದನ ಡಿ. ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ಅಧ್ಯಕ್ಷರ ಆಯ್ಕೆ ಗಾಗಿ ಇಂದು ನಡೆದ ಚುನಾ ವಣೆ ಯಲ್ಲಿ ನಿರೀಕ್ಷೆ ಯಂತೆ ಬಹು ಮತ ಹೊಂದಿದ್ದ ಬಿಜೆಪಿ ಸದಸ್ಯ ರು ಅಧ್ಯಕ್ಷ ಉಪಾ ಧ್ಯಕ್ಷ ಹುದ್ದೆ ಗಳಿಗೆ ಆಯ್ಕೆ ಗೊಂಡರು.ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಮಹಿಳಾ ಸದಸ್ಯರು ಪಡೆದಿದ್ದಾರೆ.ಮೈಸೂರು ಪ್ರಾದೇಶಿಕ ವಿಭಾಗದ ಆಯುಕ್ತೆ ಎಂ.ವಿ. ಜಯಂತಿ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.ಹೆಚ್ಚುವರಿ ಆಯುಕ್ತ ಮಂಜುನಾಥ್ ನಾಯಕ್.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಉಪಸ್ಥಿತರಿದ್ದರು.