ಸಭೆಯಲ್ಲಿ ಉತ್ತರಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಅನುಮೋದನೆ ಪಡೆದ ಯೋಜನೆ ಪ್ರತಿ, ಖಾತಾ ಅಥವಾ ಆರ್ ಟಿ ಸಿ, ಇನ್ ಕಂ ಸರ್ಟಿಫಿಕೇಟ್ ಕೊಡಬೇಕು. ಆದರೆ ಸಾಲ ನೀಡಲು ಆದಾಯ ಪ್ರಮಾಣ ಪತ್ರ ಮಾನದಂಡ ವಾಗುವುದಿಲ್ಲ ಎಂಬುದನ್ನು ಸಭೆಗೆ ತಿಳಿಸಿದರು.
ನೀರಿನ ತೆರಿಗೆ, ವಾಣಿಜ್ಯ, ಉದ್ಯಮ ತೆರಿಗೆ ವಸೂಲಾತಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಗುರಿ ಸಾಧಿಸದ ಅಧಿಕಾರಿಗಳಿಗೆ ಮುಂದಿನ ತಿಂಗಳೊಳಗೆ ನಿಗದಿತ ಗುರಿ ಸಾಧಿಸಬೇಕೆಂದು ತಾಕೀತು ಮಾಡಿದರು. ನೀರಿನ ಬಿಲ್ ಪಾವತಿಸದವರಿಗೆ ಸಂಪರ್ಕ ಕಡಿತ ಮಾಡಿ ವರದಿ ನೀಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಘನ ತ್ಯಾಜ್ಯ ವಿಲೇ ಯಲ್ಲಿ ಆದ ಪ್ರಗತಿ ಬಗ್ಗೆ, ಎಲ್ಲಾ ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಒಂದು ಉದ್ಯಾನವನ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿಯವರಿಗೆ ನಿವೇಶನ ಗುರುತಿಸುವಲ್ಲಿ ಲೋಪವಾದರೂ ಅದು ದೌರ್ಜನ್ಯಕ್ಕೆ ಸಮ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಾಕತ್ ರಾವ್ ಸ್ವಾಗತಿಸಿದರು. ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.