Tuesday, November 8, 2011

" ವಾಯುಮಾಲಿನ್ಯ ಬಗ್ಗೆ ಜಾಗೃತಿ ಅಗತ್ಯ "

ಮಂಗಳೂರು,ನವೆಂಬರ್.08 : ಜನಸಂಖ್ಯಾ ಸ್ಫೋಟದ ಜೊತೆಗೆ ವಾಹನಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದ್ದು, ಇದರ ಪರಿಣಾಮವಾಗಿ ದೇಶದ ಪಟ್ಟಣ, ನಗರ ಪ್ರದೇಶಗಳು ವಾಯು ಮಾಲಿನ್ಯದಿಂದ ಕಲುಷಿತವಾಗಿದೆ ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಹೇಳಿದರು.ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಡಳಿತ ಮತ್ತು ಪ್ರಾದೇ ಶಿಕ ಸಾರಿಗೆ ಕಚೇ ರಿಯು ಜಂಟಿ ಯಾಗಿ ಹಮ್ಮಿ ಕೊಂಡಿ ದ್ದ ವಾಯು ಮಾಲಿನ್ಯ ನಿಯಂ ತ್ರಣ ಮಾಸಾ ಚರಣೆ ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ವಿಶ್ವ ಸಂಸ್ಥೆ ನೀಡಿದ ವರದಿಯ ಪ್ರಕಾರ ವಾಯು ಮಾಲಿನ್ಯದಿಂದ ಜಗತ್ತಿನಲ್ಲಿ ವರ್ಷಕ್ಕೆ 2.4 ಮಿಲಿಯನ್ ಜನರು ಸಾಯುತ್ತಿದ್ದಾರೆ ಅಲ್ಲದೆ ಜಾಗತಿಕ ತಾಪಮಾನ ಕೂಡ ಗಣನೀಯವಾಗಿ ಏರುತ್ತಿದೆ.ಪರಿಸರ ಸಂರಕ್ಷಣೆ, ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಅಧಿಕೃತ ರಾಯಭಾರಿಗಳಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾಡಳಿತ ಘನತ್ಯಾಜ್ಯ ವಿಲೇ,ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಒಳಚರಂಡಿ ವ್ಯವಸ್ಥೆಯೂ ನಮಗೆ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ನಿಷೇಧವನ್ನು ಜಿಲ್ಲೆಯಲ್ಲಿ ಈಗಾಗಲೇ ಜಾರಿಗೆ ತಂದಿದ್ದರೂ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ; ಜನರು ಅಭ್ಯಾಸ ಬಲವನ್ನು ಬದಲಾಯಿಸಬೇಕು; ಪರಿಸರ ಸ್ನೇಹಿ ಸೈಕಲ್ ನ್ನು ಯುವಜನಾಂಗ ಬಳಸಿದರೆ ಪರಿಸರ ಮಾಲಿನ್ಯ ತಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.ಎನ್ ಐ ಟಿ ಕೆಯ ಸಿವಿಲ್ ಇಂಜಿ ನಿಯ ರಿಂಗ್ ವಿಭಾ ಗದ ಅಸಿ ಸ್ಟೆಂಟ್ ಪ್ರೊಫೆ ಸರ್ ಡಾ. ಬಿ. ಮನು ಉಪ ನ್ಯಾಸ ನೀಡಿ ದರು. ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿ ಸಿದ್ದ ಸಂತ ಅಲೋ ಷಿಯಸ್ ಕಾಲೇ ಜಿನ ಪ್ರೊ. ಜಾನ್ ಎಡ್ವರ್ಡ್ ಡಿ ಸಿಲ್ವಾ ಅವರು ಪರಿಸರ ಸಂರ ಕ್ಷಣೆಗೆ ವಿದ್ಯಾ ರ್ಥಿಗಳು ಹದಿ ನೆಂಟು ವರ್ಷ ವಾಗದೆ ಮೋಟಾರ್ ಸೈಕಲ್ ಚಾಲನೆ ಮಾಡಬೇಡಿ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡಿ, ಶಾಲಾ ಬಸ್ಸುಗಳನ್ನು ಉಪಯೋಗಿಸಿ, ನಡಿಗೆಗೆ ಆದ್ಯತೆ ನೀಡಿ ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವುದು ಎಂದರಲ್ಲದೆ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಮಾಡಿದರು. ಅತಿಥಿ ಗಳನ್ನು ಸ್ವಾಗತಿಸಿ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ಪ್ರಾದೇ ಶಿಕ ಸಾರಿಗೆ ಅಧಿ ಕಾರಿ ಗಳಾದ ಸಿ.ಮಲ್ಲಿ ಕಾರ್ಜುನ ಅವರು ಶಾಲಾ ಮಕ್ಕ ಳಲ್ಲಿ ವಾಯು ಮಾಲಿನ್ಯ ಕುರಿತು ಜಾಗೃತಿ ಮೂಡಿ ಸಿದಾಗ ಬದ ಲಾವಣೆ ಸಾಧ್ಯ ಈ ನಿಟ್ಟಿ ನಲ್ಲಿ ಶಾಲಾ ಮಟ್ಟ ದಲ್ಲಿ ಈ ಕಾರ್ಯ ಕ್ರಮ ಗಳನ್ನು ಹಮ್ಮಿ ಕೊಳ್ಳ ಲಾಗುತ್ತಿದೆ ಎಂದರು. ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಳ್ಳಾಲ್ ಮುಖ್ಯ ಅಥಿತಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆ ಪ್ರತಿಜ್ಞೆ ಸ್ವೀಕಾರವನ್ನು ಜಿಲ್ಲಾಧಿಕಾರಿಗಳು ಬೋಧಿಸಿದರು. ವಾಹನಗಳಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವುದು ಹೇಗೆ ಎಂಬ ಕಿರುಹೊತ್ತಿಗೆಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.ಸೀನಿಯರ್ ಇನ್ಸ್ ಪೆಕ್ಟರ್ ಜಿ.ಎಸ್. ಹೆಗ್ಡೆ ವಂದಿಸಿದರು. ಕೇಶವ ಧರಣಿ ಅವರು ಕಾರ್ಯ ಕ್ರಮ ನಿರೂಪಿಸಿದರು.