
ದೇಶ ದಾದ್ಯಂ ತ ಐಐಟಿ ಕಾನ್ಪೂರ್ ಯೋ ಜನೆ ಮೂಲಕ ವಾತಾ ವರಣ ಕಲು ಷಿತ ವಾಗು ವುದನ್ನು ತಡೆ ಯಬ ಹುದಾ ಗಿದೆ. ಕೇಂದ್ರ ಸರ್ಕಾ ರದ ಹೊಸ ಯೋಜನೆ ಗಳಿಗೆ ರಾಜ್ಯದ ಸಹ ಕಾರ ಅಗತ್ಯ. ಸರ್ಕಾರ ತುರ್ತಾ ಗಿ ಸ್ಪಂದಿ ಸಿದಲ್ಲಿ ಹೊಸ ರೈಲು ಲೈನ್ ಗಳನ್ನು ಅನು ಷ್ಠಾನ ಮಾಡ ಲಾಗುವುದು. 50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೇತ್ರಾವತಿ ನದಿಗೆ ರೈಲು ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆಯೆಂದು ರೈಲ್ವೆಯ ರಾಜ್ಯ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಅವರು ಇಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಂಗಳೂರು ಸೆಂಟ್ರಲ್-ಪಾಲಕ್ಕಾಡ್ ಜಂಕ್ಷನ್ ಇಂಟರ್ಸಿಟಿ ಎಕ್ಸ್ಪ್ರೆಸ್ ಪ್ರಾರಂಭೋತ್ಸವದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡುತ್ತಿದ್ದರು.ಅವರು ಮುಂದುವರೆದು ಮಾತನಾಡುತ್ತಾ ದೇಶದಾದ್ಯಂತ ದಿನಂಪ್ರತಿ 2 ಕೋಟಿ ಜನರು ರೈಲುಗಳನ್ನು ಅವಲಂಭಿಸಿ ಪ್ರಯಾಣಿಸುತ್ತಾರೆ. 14 ಲಕ್ಷ ನೌಕರರು ಈ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಮಂಗಳೂರು-ಪಾಲಕ್ಕಾಡ್ ಇಂಟರ್ಸಿಟಿ ರೈಲನ್ನು ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಉಡುಪಿ ಕುಂದಾಪುರ ಬೈಂದೂರು ಇಂಟರ್ಸಿಟಿ ರೈಲು ಪ್ರಾರಂಭಿಸಲು ಪ್ರಯತ್ನಿಸಲಾಗುವುದು. ಕರಾವಳಿಯ ರಾಜ್ಯ ಸಭಾ ಸದಸ್ಯರಾದ ಅಸ್ಕರ್ ಫೆರ್ನಾಂಡಿಸ್ ಅವರು ಕರ್ನಾಟಕದ ಪ್ರಗತಿಗಾಗಿ ಹೆಚ್ಚು ಅನುದಾನ ಬಿಡುಗಡೆಯಾಗಲು ಶ್ರಮಿಸುತ್ತಿದ್ದಾರೆ. ಇದರ ಫಲವಾಗಿ ಸಕಲೇಶಪುರದಿಂದ40 ಕಿ.ಮೀ.ಘಾಟಿ ಪ್ರದೇಶದ ಹೆದ್ದಾರಿಯನ್ನು ಕಾಂಕ್ರಿಟೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.

ಸಮಾರಂಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಕೆ.ಎ.ಮೋಹನ್ ,ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿ,ಗಫೂರ್ ಮೊಯಿದಿನ್ ಭಾವಾ,ನವೀನ್ ಡಿಸೋಜ ಹಾಗೂ ಡೆನಿಸ್ ಉಪಸ್ಥಿತರಿದ್ದರು. ರೈಲ್ವೆ ಡಿವಿಜನಲ್ ಮ್ಯಾನೇಜರ್ ಎಸ್.ಕೆ.ರೈನಾ ವಂದಿಸಿದರು.