Saturday, November 26, 2011

ಕಾವೂರು ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ.

ಮಂಗಳೂರು,ನವೆಂಬರ್.26 : ರಾಜ್ಯದಲ್ಲಿನ 6,500 ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಕೆರೆ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿದ್ದು, ಮುಂದಿನ ಅಧಿವೇಶನದಲ್ಲಿ ಇದರ ಮಂಡನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.
ಅವ ರಿಂದು ಮಂಗ ಳೂರು ತಾಲೂ ಕಿನ ಕಾವೂ ರಿನ ಲ್ಲಿರುವ 8.37 ಎಕರೆ ವಿಸ್ತೀ ರ್ಣದ ಕಾವೂರು ಕೆರೆ ಅಭಿ ವೃದ್ಧಿ ಕಾಮ ಗಾರಿಗೆ ಚಾಲನೆ ನೀಡಿ ಮಾತ ನಾಡು ತ್ತಿದ್ದರು. 2011-12ನೇ ಸಾಲಿನ ಸನ್ಮಾನ್ಯ ಮುಖ್ಯ ಮಂತ್ರಿ ಗಳ ಕೆರೆ ಗಳ ಪುನ ರುಜ್ಜೀ ವನ ಕಾರ್ಯ ಕ್ರಮ ದಡಿ ಒಂದು ಕೋಟಿ ರೂ. ವೆಚ್ಚ ದಲ್ಲಿ ಅಭಿ ವೃದ್ಧಿ ಪಡಿ ಸಲು ಸಣ್ಣ ನೀರಾವರಿ ಇಲಾಖೆಯವರು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 122 ಕೆರೆಗಳನ್ನು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಕೆರೆಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸಣ್ಣ ನೀರಾ ವರಿ ಇಲಾಖೆ ಯಿಂದ ಕಾವೂರು ಮತ್ತು ಕಾರಿಂ ಜೇಶ್ವ ರದ ಕೆರೆ ಗಳ ಅಭಿ ವೃದ್ಧಿ ನಡೆ ಯಲಿದೆ. ಕಾವೂರು ಕೆರೆ ಅಭಿ ವೃದ್ಧಿ ಕಾಮ ಗಾರಿ ಯಡಿ ಹೂಳೆ ತ್ತುವಿಕೆ, ಶಿಥಿಲ ಗೊಂಡ ಕೆರೆ ದಂಡೆ ಭದ್ರ ಪಡಿ ಸುವಿಕೆ, ದಂಡೆಯ ಇಳಿ ಜಾರಿಗೆ ಸುಮಾರು 500 ಮೀ ಉದ್ದದ ಗ್ರಾ ನೈಟ್ ಕಲ್ಲಿನ ರಿವೆಟ್ ಮೆಂಟ್ ರಚಿಸಲು ಅವ ಕಾಶ ಕಲ್ಪಿಸ ಲಾಗಿದೆ. ಮಳೆ ಗಾಲ ದಲ್ಲಿ ಕೆರೆಗೆ ಮಳೆನೀರು ಒಳಹರಿದು ಬರುವ ತೋಡಿಗೆ 5 ಸಂಖ್ಯೆಯ 600 ಮಿ ಮಿ ವ್ಯಾಸದ ಪೈಪು ಮೋರಿಯನ್ನು ನಿರ್ಮಿಸುವುದು ಹಾಗೂ 49.80 ಮೀ ಉದ್ದದ ಮಾದರಿ ತಡೆಗೋಡೆ ನಿಮರ್ಿಸುವ ಕಾಮಗಾರಿ ಒಳಗೊಂಡಿದೆ. ರಸ್ತೆ ಮತ್ತು ಇತರ ಅಬಿವೃದಿಗಳ ಹೆಸರಿನಲ್ಲಿ ಕೆರೆ ಒತ್ತುವರಿಯಾದ ಸ್ಥಳವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಕೆರೆ ಅಂತರ್ಜಲ ಕುಸಿತದ ಇಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿ ಅಗತ್ಯವನ್ನು ಪ್ರತಿಪಾದಿಸಿದ ಸಚಿವರು, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸ್ಥಳೀಯರ ಸಹಕಾರ ಅಗತ್ಯ ಎಂದರು.
ಕೆರೆ ಅಭಿವೃದ್ಧಿ ಕಾಯಿದೆ ಅಥವಾ ನೀರು ನೀತಿ ಹಾಗೂ ಪರಿಸರ ಮಾಲಿನ್ಯ ನೀತಿಗಿಂತ ನೀರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕೆಂದ ಸಚಿವರು, ಈಗಾಗಲೇ ನಗರದ ಎಲ್ಲ ಕೆರೆಗಳ ಸಮೀಕ್ಷೆ ನಡೆಸಲು ಹಾಗೂ ಅತಿಕ್ರಮಿತ ಪ್ರದೇಶವನ್ನು ತೆರವು ಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಕೆರೆಗಳ ಅಭಿವೃದ್ಧಿಯಿಂದ ಕೃಷಿಗೆ ನೀರು, ಮೀನು ಸಾಕಾಣಿಕೆಯಂತಹ ಪೂರಕ ಕೃಷಿಯನ್ನು ಕೈಗೊಳ್ಳಬಹುದು ಬಮತ್ತು ಸರ್ಕಾರ ಈ ನಿಟ್ಟಿನಲ್ಲಿ ಬೇಕಾರ ಎಲ್ಲಾ ಸಹಕಾರವನ್ನು ನೀಡಲಿದೆ ಎಂದರು.
ಸಮಾರಂಭದಲ್ಲಿ ಪಾಲಿಕೆ ಮೇಯರ್ ಪ್ರವೀಣ್, ಪಾಲಿಕೆ ಸದಸ್ಯರುಗಳಾದ ದೀಪಕ್ ಪೂಜಾರಿ, ಹರಿನಾಥ್, ವೆಂಕಟೇಶ್, ಮಧುಕಿರಣ್ ಅವರು ಉಪಸ್ಥಿತರಿದ್ದರು.
ಬಳಿಕ ಸಚಿ ವರು ನೀರು ಮಾರ್ಗ, ಮಾಣೂರು, ಕೆಲ ರಾಯ್ ಕ್ರಾಸ್, ಬೊಂಡ ತಿಲ,ಅಡ್ಯಾರ್ ಪದವು ಪರಿ ಸರ ದಲ್ಲಿ ರಸ್ತೆ ಗಳ ಡಾಮ ರೀಕ ರಣ ಬಗ್ಗೆ ಪರಿ ಶೀಲನೆ ನಡೆ ಸಿದರು. ಇದೇ ಸಂದ ರ್ಭದಲ್ಲಿ ಮಾನೂರು ಅ ನಂತ ಪದ್ಮ ನಾಭ ದೇವ ಸ್ಥಾನದ ಬಳಿ ನಿರ್ಮಾ ಣವಾ ಗಲಿ ರುವ 10 ಲಕ್ಷ ರೂ. ವೆಚ್ಚದ ತಡೆ ಗೋಡೆ ಕಾಮ ಗಾರಿಗೆ ಸಚಿ ವರು ಶಿಲ ನ್ಯಾಸ ಮಾಡಿ ದರು. ಈ ಸಂದ ರ್ಭದಲ್ಲಿ ಸ್ಥಳಿಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಗ್ರಾಮಪಂಚಾಯತ್ ಉಪಾದ್ಯಕ್ಷರು, ಸದಸ್ಯರು, ಇಂಜಿನಿಯರ್ಸ್ ಉಪಸ್ಥಿತರಿದ್ದರು.