ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರಗ ಮುಖಂಡರು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕೊರಗರ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಿದರು.
ಜಿಲ್ಲೆಯಲ್ಲಿ 857 ಕೊರಗ ಕುಟುಂಬಗಳಿದ್ದು,ಅವರಲ್ಲಿ 501 ಕುಟುಂಬಗಳಿಗೆ ಸ್ವಂತ ಜಮೀನು ಇದೆ.209 ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ, 24 ಕುಟುಂಬಗಳು ಅರಣ್ಯ ಪ್ರದೇಶದಲ್ಲಿದ್ದಾರೆ. 122 ಕುಟುಂಬಗಳು ಇತರ ಜಮೀನುಗಳಲ್ಲಿ ಇದ್ದಾರೆ.
501 ಕುಟುಂಬಗಳಿಗೆ ತಮ್ಮ ಜಮೀನು ಹಕ್ಕು ಪತ್ರ ಈಗಾಗಲೇ ಇದ್ದು ಇನ್ನೂ 356 ಕುಟುಂಬಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂದ ಜಿಲ್ಲಾಧಿಕಾರಿಗಳು ಹಕ್ಕು ಪತ್ರ ವಿತರಣೆಯನ್ನು ,ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಹಶೀಲ್ದಾರರಿಗೆ ಕಾಲಮಿತಿಯನ್ನು ನಿಗಧಿಪಡಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 73 ಕೊರಗರ ಕುಟುಂಬಗಳಿಗೆ 82.15 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 27 ಕುಟುಂಬಗಳಿಗೆ 29.92 ಎಕ್ರೆ ಅತೀ ಹೆಚ್ಚು ,ಅತೀ ಕಡಿಮೆ ಸುಳ್ಯ ತಾಲೂಕಿನಲ್ಲಿ ಒಂದು ಕುಟುಂಬಕ್ಕೆ 0.70 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಮಂಗಳೂರು ತಾಲೂಕಿನ 19 ಕುಟುಂಬಗಳಿಗೆ 28.27 ಎಕ್ರೆ ,ಬೆಳ್ತಂಗಡಿ ತಾಲೂಕಿನ 21 ಕುಟುಂಬಗಳಿಗೆ 16.93 ಎಕ್ರೆ ಹಾಗೂ ಪುತ್ತೂರು ತಾಲೂಕಿನ 05 ಕುಟುಂಬಗಳಿಗೆ 6.33 ಎಕ್ರೆ ಜಮೀನು ಮಂಜೂರು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಪ್ರೇರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೊರಗ ಹೆಣ್ಣು ಮಕ್ಕಳಿಗೆ 5 ತಿಂಗಳ ಗೌರವಧನದ ಚೆಕ್ಗಳನ್ನು ನೀಡಿದರು. ಸ್ವಂತ ನಿವೇಶನವಿದ್ದು, ಮನೆ ನಿರ್ಮಿಸಲು ಸರ್ಕಾರ ನೀಡುವ ಅನುದಾನದ ಚೆಕ್ ಗಳನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ಮುಂತಾದವರು ಹಾಜರಿದ್ದರು.