Saturday, November 12, 2011

ದೇವಕಾರ್ಯದೊಂದಿಗೆ ಜನಪರ ಯೋಜನೆಗಳು ಅನುಷ್ಠಾನವಾಗಲಿ: ಧನಂಜಯ ಕುಮಾರ್

ಮಂಗಳೂರು,ನವೆಂಬರ್.12: ಲೋಕ ಕಲ್ಯಾಣಾರ್ಥವಾಗಿ ಹಾಗೂ ಜನಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯ ಸಂರಕ್ಷಣೆಗಾಗಿ ನಡೆಯುವ ಮಹಾಮಸ್ತಕಾಭಿಷೇಕವು ವೇಣೂರಿನಲ್ಲಿ 2000ನೇ ಇಸವಿಯಲ್ಲಿ ನಡೆದಿದ್ದು, ಇದೀಗ 21ನೇ ಶತಮಾನದ 2ನೇ ಮಹಾಮಸ್ತಕಾಭಿಷೇಕ ಜರುಗಲಿದ್ದು ಇದೇ ಸಂದರ್ಭದಲ್ಲಿ ವೇಣೂರಿನಲ್ಲಿ ಜನಪರ ಯೋಜನೆಗಳು ಜಾರಿಯಾಗಲಿ ಎಂದು ಧನಂಜಯ ಕುಮಾರ್ ಹೇಳಿದರು.
ಶುಕ್ರ ವಾರ (11. 11.11)ದಂದು ದಕ್ಷಿಣ ಕನ್ನಡ ಜಿಲ್ಲೆ ಯ ವೇಣೂ ರಿನ ಡಾ.ಪಿ.ಎ. ಆಳ್ವ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಭಗ ವಾನ್ ಶ್ರೀ ಬಾಹು ಬಲಿ ಸ್ವಾಮಿ ಮಹಾ ಮಸ್ತ ಕಾಭಿ ಷೇಕ ಸಮಿತಿ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಜನ ವರಿ 28 ರಿಂದ 9 ದಿನ ಗಳ ಕಾಲ ನಡೆ ಯುವ ಬೃಹತ್ ಸಮಾ ರಂಭ ವನ್ನು ಯಶಸ್ವಿ ಯಾಗಿ ಹಮ್ಮಿ ಕೊಳ್ಳಲು ಯೋಜನೆ ಯನ್ನು ಸಭೆ ಯಲ್ಲಿ ರೂಪಿ ಸಲಾ ಯಿತು.ಈಗಾಗಲೇ ಮೂಲಭೂತ ಸೌಕರ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮೂಲಕ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ನಿರ್ಮಾಣ ಕಾಮಗಾರಿಯ ನಕ್ಷೆ ಪರಿಶೀಲನೆ ಸಭೆಯಲ್ಲಿ ನಡೆಯಿತು. ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ನಿಂದ ಸಂಪರ್ಕ ರಸ್ತೆ ಅಭಿವೃದ್ಧಿಗೆ 17 ರಸ್ತೆಗಳನ್ನು 60.6 ಕಿ. ಮೀ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ವಿವರಿಸಿದರು.ಮಲ್ಟಿ ವಿಲೇಜ್ ವಾಟರ್ ಸ್ಕೀಮ್ ನಡಿ 15 ಸುತ್ತಮುತ್ತಲ ಹಳ್ಳಿಗಳಿಗೆ ನೀರೊದಗಿಸುವ ಯೋಜನೆ ಇರುವುದಾಗಿಯೂ ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಸಂಪರ್ಕ ರಸ್ತೆ ದುರಸ್ತಿ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ ಎಸ್ ಬಾಲಕೃಷ್ಣ ಅವರು ಹೇಳಿದರು.ಸಂಚಾರ ವ್ಯವಸ್ಥೆ, ಸಿಸಿ ಟಿ ವಿ ಅಳ ವಡಿಕೆ, ಏಕ ಮುಖ ಸಂಚಾ ರದ ಬಗ್ಗೆ ಪೊಲೀ ಸ್ ವ್ಯ ವಸ್ಥೆ ಬಗೆ ಎಸ್ ಪಿ ಲಾಬೂ ರಾಮ್ ಅವರು ಮಾಹಿತಿ ನೀಡಿದರು. ಅತ್ಯಂತ ಪ್ರಮು ಖವಾಗಿ ಸಾಂಕ್ರಾ ಮಿಕ ರೋಗ ಹರಡ ದಂತೆ ನೀರು ಮತ್ತು ನೈ ರ್ಮಲ್ಯ ಕಾಯ್ದು ಕೊಳ್ಳಲು ಆರೋಗ್ಯ ಇಲಾಖೆ, ಗ್ರಾಮ ಪಂಚಾ ಯತ್ ಮತ್ತು ಸ್ಥಳೀಯ ಸಮಿತಿ ಜೊತೆ ಸಮ ನ್ವಯ ಸಾಧಿಸಿ ಔಷಧಿ ಗಳ ಸಿಂಪ ಡಣೆ, ಕ್ಲೋರಿ ನೈ ಸೇಷನ್ ಕುರಿತು ಕ್ರಮ ಕೈಗೊ ಳ್ಳುವ ಬಗ್ಗೆ ಸಭೆ ಯಲ್ಲಿ ಚರ್ಚಿ ಸಲಾ ಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕುರಿತು ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ವೆಂ ನಾಯಕ್ ಅವರು ಮಾಹಿತಿ ನೀಡಿದರು. ಜೈನ ಧರ್ಮದ ಬಗ್ಗೆ, ಭರತಬಾಹುಬಲಿ ದೃಶ್ಯನಾಟಕ ಮುಂತಾದ ಅತ್ಯುತ್ತಮ ಕಾರ್ಯಕ್ರಮ ನೀಡುವ ಕುರಿತು ಸಭೆ ಸಲಹೆ ಮಾಡಿತು. ಕೆ ಎಸ್ ಆರ್ ಟಿಸಿ ಹೆಚ್ಚಿನ ಬಸ್ ಗಳನ್ನು ವ್ಯವಸ್ಥೆ ಮಾಡುವ ಕುರಿತು, ಅಗ್ನಿಶಾಮಕ ವಾಹನಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಿತು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಭಯಚಂದ್ರ ಜೈನ್, ರಮಾನಾಥ ರೈ,ಹರ್ಷೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ, ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಅಳದಂಗಡಿ ಅರಸು ಮನೆತನದ ಡಾ. ಪದ್ಮಪ್ರಸಾದ್ ಅಜಿಲರು ಸಭೆಯಲ್ಲಿ ಪಾಲ್ಗೊಂಡರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.